ಸಾರಾಂಶ
ಆಲಮೇಲ: ವಿಶ್ವಕರ್ಮ ಸಮಾಜದವರು ಶ್ರಮಜೀವಿಗಳು, ಇತರ ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ ಹೊಂದಿದವರಾಗಿದ್ದಾರೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.
ಆಲಮೇಲ: ವಿಶ್ವಕರ್ಮ ಸಮಾಜದವರು ಶ್ರಮಜೀವಿಗಳು, ಇತರ ಎಲ್ಲ ಸಮಾಜದವರೊಂದಿಗೆ ಉತ್ತಮ ಬಾಂಧವ ಹೊಂದಿದವರಾಗಿದ್ದಾರೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು ಹೇಳಿದರು.
ಪಟ್ಟಣದ ಕಾಳಿಕಾದೇವಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕರ್ಮ ಸಮಾಜದವರು ಪ್ರತಿಯೊಂದು ಗ್ರಾಮದ ಎಲ್ಲ ಸಮಾಜದವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ರೈತರಿಗೆ, ಗ್ರಾಮಸ್ಥರಿಗೆ ಪ್ರತಿಯೊಬ್ಬರಿಗೂ ಅವಶ್ಯ ಎಲ್ಲ ಸಲಕರಣೆಗಳನ್ನು ಮಾಡುವ ಮೂಲಕ ಇತರರಿಗೆ ಸಹಾಯಕ ಜೀವಿಯಾಗಿದ್ದಾರೆ ಎಂದರು.ಧರ್ಮಸಭೆ ಸಾನಿಧ್ಯವನ್ನು ಈರಯ್ಯ ಮಹಾಸ್ವಾಮಿಗಳು ಮೂರುಜಾವದಮಠ, ಅತಿಥಿಗಳಾಗಿ ಆಲಮೇಲ ತಹಸಿಲ್ದಾರ್ ಧನಪಾಲ ಶೆಟ್ಟಿ, ಪಿಎಸ್ಐ ಅರವಿಂದ್ ಅಂಗಡಿ, ಡಾ.ಪತ್ತಾರ, ವಿಶ್ವಕರ್ಮ ಸಮಾಜದ ಹಿರಿಯರಾದ ಲಚ್ಚಪ್ಪ ಪತ್ತಾರ್, ಈರಣ್ಣ ಪತ್ತಾರ, ಚಂದ್ರಕಾಂತ ಅಕ್ಕಲಕೋಟ, ಕಾಶಿನಾಥ್ ಬಡಿಗೇರ, ಈರಣ್ಣ ಪತ್ತಾರ ಹಾಗೂ ವಿಶ್ವಕರ್ಮ ಸಮಾಜದ ಹಿರಿಯರು ಭಾಗವಹಿಸಿದ್ದರು.
ಸಭೆಯಲ್ಲಿ ದಿವಂಗತ ಮೌನೇಶ ಆಚಾರ್ಯರ ಆಸೆಯಂತೆ ಕುಂಭಮೇಳಕ್ಕೆ ಹೋಗಿ ಬಂದ ಭಕ್ತಾದಿಗಳಿಗೆ ಸನ್ಮಾನಿಸಿ ಗೌರವಿಸಿ ಅವರ ಕನಸನ್ನು ನನಸುಗೊಳಿಸುವಲ್ಲಿ ಅವರ ಶ್ರೀಮತಿ ಭಾಗಿಯಾಗಿದ್ದರು. ವಿಶ್ವಕರ್ಮರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಆಲಮೇಲ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಆಗಮಿಸಿದ್ದರು. ಶಿಕ್ಷಕ ಅಶೋಕ್ ಬಡಿಗೇರ ಸ್ವಾಗತಿಸಿದರು, ಪ್ರೊ.ಗಂಗಾಧರ ಪತ್ತಾರ ನಿರೂಪಿಸಿದರು.ಮಲ್ಲಿಕಾರ್ಜುನ ಉಪ್ಪಿನ ಹಾಗೂ ಸಂಗಡಿಗರಿಂದ ಸಂಗೀತ ಸೇವೆ ಜರುಗಿತು.