ಅಲೆಮಾರಿ ಹೆಣ್ಣುಮಕ್ಕಳ ಸಾವು ಪ್ರಕರಣ: ಮಹಿಳಾ ಆಯೋಗ ಪತ್ರ

| Published : Mar 02 2025, 01:19 AM IST

ಸಾರಾಂಶ

Women's Commission letter on death of nomadic girls

-ಗುರುಮಠಕಲ್‌ನ ಇಂದಿರಾ ನಗರದಲ್ಲಿರುವ ಮೃತರ ತನಿಖೆಗೆ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ

- ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಸೇರಿದಂತೆ ಮತ್ತಿತರರಿಂದ ಮೃತರ ಕುಟುಂಬಸ್ಥರ ಭೇಟಿ

-------

ಕನ್ನಡಪ್ರಭ ವಾರ್ತೆ ಯಾದಗಿರಿ/ಗುರುಮಠಕಲ್‌

ತಾಲೂಕಿನ ಸೈದಾಪುರ ಸಮೀಪದ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇದೇ ಫೆ.12 ರಂದು 15 ವರ್ಷದ ಬಾಲಕಿ ಹಾಗೂ 19 ವರ್ಷದ ಯುವತಿಯ ಮೃತದೇಹಗಳ ಪತ್ತೆ ಹಾಗೂ ಶಂಕಾಸ್ಪದ ಆರೋಪಗಳ ಹಿನ್ನೆಲೆಯಲ್ಲಿ, ಈ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆಗೆ, ಕುಟುಂಬಕ್ಕೆ ಪರಿಹಾರದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಫೆ.24 ರಂದು ಪತ್ರ ಬರೆದಿದ್ದಾರೆ.

ಅಲ್ಲದೆ, ಫೆ.27 ರಂದು ಯಾದಗಿರಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಪತ್ರ ಬರೆದಿರುವ ಡಾ. ನಾಗಲಕ್ಷ್ಮಿ ಚೌಧರಿ, ಯಾದಗಿರಿ ಜಿಲ್ಲೆಯ ಬುಡ್ಗ ಜಂಗಮ ಸಮುದಾಯದ ಇಬ್ಬರು ಹೆಣ್ಣು ಮಕ್ಕಳು ಚಿಂದಿ ಆಯಲು ಹೋಗಿದ್ದಾಗ, ಕಿಡಿಗೇಡಿಗಳು ಹೆಣ್ಣು ಮಕ್ಕಳನ್ನು ಹೊತ್ತೊಯ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿ ಕೆರೆಗೆ ಎಸೆದು ಪರಾರಿಯಾಗಿರುವ ಬಗ್ಗೆ ವರದಿಯಾಗಿದ್ದು, ಈ ಸಂಬಂಧ ಪೊಲೀಸರು ಗಂಭೀರವಾಗಿ ಪ್ರಕರಣ ದಾಖಲಿಸಿಲ್ಲವೆಂದು ಆರೋಪಿಸಿ, ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿರುವ ಬಗ್ಗೆ ವರದಿಯಾಗಿರುತ್ತದೆ. ಆದ್ದರಿಂದ, ಸದರಿ ಪ್ರಕರಣದ ಬಗ್ಗೆ ನಿಯಾಮನುಸಾರ ಪರಿಶೀಲಿಸಿ, ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ಅತೀ ಶೀಘ್ರದಲ್ಲಿ ಕಳುಹಿಸುವಂತೆ ತಿಳಿಸಿದ್ದಾರೆ.

ಫೆ.12 ರಂದು ನೀಲಹಳ್ಳಿ ಕೆರೆಯಲ್ಲಿ ಅಲೆಮಾರಿ ಜನಾಂಗದ ಈ ಇಬ್ಬರು ಹೆಣ್ಣುಮಕ್ಕಳ ಶವಗಳು ಪತ್ತೆಯಾಗಿದ್ದವು. ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂದು ಶಂಕಿಸಿ, ಸಮಗ್ರ ತನಿಖೆಗೆ ಆಗ್ರಿಹಿಸಿ ಸಮುದಾಯ ಹಾಗೂ ವಿವಿಧ ಸಂಘಟನೆಗಳಿಂದಯಾದಗಿರಿಯಲ್ಲಿ ಪ್ರತಿಭಟನೆಯೂ ನಡೆದಿತ್ತು. ರಾಜ್ಯವ್ಯಾಪಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಬಗ್ಗೆ ಮಹಿಳಾ ಸಂಘಟನೆಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ, ಪ್ರಾಮಾಣಿಕ ತನಿಖೆಗೆ ಆಗ್ರಹಿಸಿದ್ದರು.

.....ಬಾಕ್ಸ್‌..

ಇದು ವ್ಯವಸ್ಥಿತ ಜೋಡಿ ಕೊಲೆ: ಕೆ. ನೀಲಾ ಶಂಕೆ

ಇಂದಿರಾನಗರದ ಇಬ್ಬರು ಬಾಲಕಿಯರು ಚಿಂದಿ ಆಯಲು ತಾಲೂಕಿನ ನೀಲಹಳ್ಳಿಗೆ ತೆರಳಿ ಅಲ್ಲಿನ ಕೆರೆಯಲ್ಲಿ ಅನುಮಾನಾಸ್ಪದ ರೀತಿ ಶವಗಳಾಗಿ ಪತ್ತೆಯಾಗಿರುವುದು ಕೂಲಂಕುಷ ತನಿಖೆಯಾಗಬೇಕು ಮತ್ತು ವಾಸ್ತವಾಂಶ ಪತ್ತೆ ಹಚ್ಚಬೇಕು ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಅವರು ಆಗ್ರಹಿಸಿದ್ದಾರೆ.ಇಂದಿರಾನಗರದ ಮೃತ ಬಾಲಕಿಯರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಇದು ಸಹಜವಾದ ಸಾವು ಅಲ್ಲ. ಮೃತ ಯುವತಿಯರ ದೇಹದ ಮೇಲೆ ಗಾಯಗಳು ಕಂಡು ಬಂದಿದೆ. ಮೂಗಿನಲ್ಲಿ ರಕ್ತ ಬಂದಿದೆ. ಇದೊಂದು ವ್ಯವಸ್ಥಿತ ಜೋಡಿ ಕೊಲೆಯಾಗಿದೆ. ಅತ್ಯಾಚಾರವು ನಡೆದಿರುವ ಸಾಧ್ಯತೆಗಳಿವೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಿದರು.

----

ಕೋಟ್‌-1 :

ಅಮಾಯಕ ಬಾಲಕಿಯರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದು ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ಎಂದು ಕಳವಳ ವ್ಯಕ್ತಪಡಿಸಿದ ಕೆ. ನೀಲಾ ಅವರು, ಮುಗ್ಧ ಜನರ ಜೀವದ ಜೊತೆಯಾಗಿರುವ ಅನ್ಯಾಯ ಸಹಿಸಲಿಲ್ಲ. ಇದರ ಬಗ್ಗೆ ಸೈದಾಪುರ ಠಾಣೆ ಅಧಿಕಾರಿಗಳು ಹೊರತುಪಡಿಸಿ ಉನ್ನತ ಅಧಿಕಾರಿಗಳಿಂದ ಪ್ರಕರಣ ತನಿಖೆ ಮಾಡಿಸಬೇಕು.

- ಕೆ. ನೀಲಾ, ಜನವಾದಿ ಸಂಘಟನೆ ರಾಜ್ಯಾಧ್ಯಕ್ಷರು.

-

ಕೋಟ್‌-2........... ಮೇಲ್ನೋಟಕ್ಕೆ ಇದು ಅತ್ಯಾಚಾರ, ಕೊಲೆ ಅಂತನಿಸಿಲ್ಲ. ಅಲ್ಲದೆ, ಪೋಸ್ಟ್‌ ಮಾರ್ಟಮ್‌ ವರದಿಯಲ್ಲೂ ಅಂತಹ ಆರೋಪಗಳ ಕುರಿತು ವರದಿಯಾಗಿಲ್ಲ. ಎಫ್‌ಎಸ್‌ಎಲ್‌ ವರದಿ ನಂತರ ಸತ್ಯಾಸತ್ಯತೆ ಬಯಲಾಗಲಿದೆ. ಪ್ರಕರಣ ಕುರಿತು ಪೊಲೀಸ್‌ ಇಲಾಖೆ ಪ್ರಾಮಾಣಿಕ ತನಿಖೆಯಾಗಬೇಕು.

- ಪ್ರಥ್ವಿಕ್‌ ಶಂಕರ್‌, ಎಸ್ಪಿ, ಯಾದಗಿರಿ.

-----

1ವೈಡಿಆರ್20: ಗುರುಮಠಕಲ್ ಪಟ್ಟಣದ ಇಂದಿರಾನಗರದ ಮೃತ ಬಾಲಕಿಯರ ಕುಟುಂಬಗಳನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಕೆ. ನೀಲಾ ಅವರು ಭೇಟಿ ಮಾಡಿ ಸಾಂತ್ವನ ಹೇಳಿದರು.

-

1ವೈಡಿಆರ್‌21 : ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಪತ್ರ.

------

ಅಲೆಮಾರಿ ಜನಾಂಗದ 15 ವರ್ಷದ ಬಾಲಕಿ ಹಾಗೂ 19 ವರ್ಷದ ಯುವತಿ ಅನುನಾಮಾಸ್ಪದ ಸಾವು ಪ್ರಕರಣ- ಅತ್ಯಾಚಾರಗೈದು ಕೊಲೆ ಶಂಕೆ : ಮಹಿಳಾ ಆಯೋಗದಿಂದ ಎಸ್ಪಿಗೆ ಪತ್ರ: ತನಿಖೆಗೆ ಸೂಚನೆ- ಫೆ.12ರಂದು ಗುರುಮಠಕಲ್‌ ಸಮೀಪ ನೀಲಹಳ್ಳಿ ಗ್ರಾಮದ ಕೆರೆಯಲ್ಲಿ ಇಬ್ಬರ ಶವಗಳು ಪತ್ತೆ- ಗುರುಮಠಕಲ್‌ನ ಇಂದಿರಾ ನಗರದಲ್ಲಿರುವ ಮೃತರ ತನಿಖೆಗೆ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ