ಸಾರಾಂಶ
ಕಳೆದ ಪ್ರಕಟಗೊಂಡ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ-100 ಸ್ಥಾನ ಪಡೆದ ಸುಮಿತ್ ನಗಾಲ್ರನ್ನು ಕೆಎಸ್ಎಲ್ಟಿಎ ವತಿಯಿಂದ ಸನ್ಮಾನಿಸಲಾಯಿತು.
ಬೆಂಗಳೂರು: ಕಳೆದ ಪ್ರಕಟಗೊಂಡ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರ-100 ಸ್ಥಾನ ಪಡೆದ, 2017 ರ ಬೆಂಗಳೂರು ಓಪನ್ ಚಾಂಪಿಯನ್ ಸುಮಿತ್ ನಗಾಲ್ ಅವರನ್ನು ಕೆಎಸ್ಎಲ್ಟಿಎ ಹಿರಿಯ ಉಪಾಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರು ಕೆಎಸ್ಎಲ್ಟಿಎ ಕಾರ್ಯದರ್ಶಿ ಮಹೇಶ್ವರ್ ರಾವ್, ಐಎಎಸ್ ಮತ್ತು ಟೂರ್ನಮೆಂಟ್ ನಿರ್ದೇಶಕ ಸುನಿಲ್ ಯಜಮಾನ್ ಸಮ್ಮುಖದಲ್ಲಿ ಗೌರವಿಸಿದರು. ನಗಾಲ್ ಅವರ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಿ 5 ಲಕ್ಷ ರುಪಾಯಿ ಚೆಕ್ ಅನ್ನು ಸಹ ನೀಡಲಾಯಿತು.