ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಅರಿವು

Aug 01 2025, 11:45 PM IST
ಬಸವಾಪಟ್ಟಣ ಗ್ರಾಮದ ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಅರಕಲಗೂಡು ಹಾಗೂ ವಕೀಲರ ಸಂಘ ಅರಕಲಗೂಡು ಇವರ ಸಂಯುಕ್ತ ಆಶ್ರಯದಲ್ಲಿ ಕೆಪಿಎಸ್ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಹಿರಿಯ ವಕೀಲರಾದ ಅರಕಲಗೂಡು ತಾಲೂಕು ಕಾನೂನು ಸಲಹೆಗಾರರಾದ ಪ್ರಕಾಶ್ ಎಚ್.ಜೆ ಅವರು ಮಾತನಾಡಿ, ಪೋಕ್ಸೋ ಕಾಯಿದೆ ಕುರಿತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಬಗ್ಗೆ ತಿಳಿಸಿದರು. ೨೦೧೨ರಲ್ಲಿ ಪೋಕ್ಸೋ ಜಾರಿಯಾಗಿದ್ದು, ಲೈಂಗಿಕ ದೌರ್ಜನ್ಯ ಒಳಗಾದ ಮಕ್ಕಳು ಹೇಗೆ ಎಲ್ಲಾ ಕಾನೂನು ನೆರವು ಪಡೆಯಬಹುದು. ಇಂತಹ ಪ್ರಕರಣದಲ್ಲಿ ಭಾಗಿಯಾಗಿರುವ ಮಕ್ಕಳಿಗೆ ಶಿಕ್ಷಣ ಪ್ರಮಾಣ ಇತ್ಯಾದಿಗಳ ಬಗ್ಗೆ ವಕೀಲ ಪ್ರಕಾಶ್ ಅವರು ವಿಸ್ತೃತವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.