ಗ್ಯಾರಂಟಿಗಳು ಚುನಾವಣೆ ಗೆಲುವಿಗೆ ಸಹಕಾರಿ ಎಂದ ಪ್ರಕಾಶ್
Jun 13 2025, 02:26 AM ISTಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ಅತೀ ಹೆಚ್ಚು ಅಂದರೆ ೮೧,೧೧೧ ಜನ ನೋಂದಣಿಯಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಸರ್ಕಾರದಿಂದ ಫಲಾನುಭವಿಗಳಿಗೆ ೧೫,೮೨,೪೨,೦೦೦ ರು. ಹಣ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆ ಅಡಿ ಒಟ್ಟು ೮೨,೪೩೩ ಜನ ಫಲಾನುಭವಿಗಳು ಸದರಿಯೋಜನೆಯನ್ನು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ಶಕ್ತಿ ಯೋಜನೆ ಅಡಿ ಒಂದು ತಿಂಗಳಿಗೆ ೮,೨೫,೬೫೮ ಜನ ಪ್ರಯಾಣ ಮಾಡಿದ್ದು ಇದರಿಂದ ಸರ್ಕಾರ ೩,೭೧,೦೬,೪೭೨ ವ್ಯಯ ಮಾಡುತ್ತಿದೆ ಎಂದು ಪ್ರಕಾಶ್ ಗೌಡ ತಿಳಿಸಿದರು.