ಅಗತ್ಯಕ್ಕಿಂತ ಹೆಚ್ಚು ಹಣ, ಆಸ್ತಿಯಿಂದ ಜೀವನ ಒತ್ತಡ
Jun 16 2025, 02:55 AM ISTಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಇಂದು ಮನುಷ್ಯ ಆಡಂಬರ ಜೀವನಕ್ಕೆ ಮಾರುಹೋಗಿ ಅಗತ್ಯಕ್ಕಿಂತ ಹೆಚ್ಚು ಹಣ, ಆಸ್ತಿ ಅಂತಸ್ತು ಗಳಿಸುವತ್ತ ಮುಖ ಮಾಡುತ್ತಿರುವುದರಿಂದ ಒತ್ತಡದ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಶರಣರ ಚಿಂತಕರ, ದಾರ್ಶನಿಕರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ನಡೆಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ನಾವು ಉತ್ತಮರಾಗಿ ಬಾಳಿ ಬದುಕಲು ಮತ್ತು ಗೌರವದಿಂದ ಕಾಣಲು ಸಾಧ್ಯ ಎಂದು ಬಸವನಬಾಗೇವಾಡಿಯ ಶಿಕ್ಷಕಿ ಗಿರಿಜಾ ಪಾಟೀಲ ಹೇಳಿದರು.