ಬೆಳ್ತಂಗಡಿ: ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಅನುದಾನ ಮಂಜೂರು

| Published : Oct 16 2025, 02:01 AM IST

ಬೆಳ್ತಂಗಡಿ: ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಅನುದಾನ ಮಂಜೂರು
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ 26 ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ತಲಾ 65 ಲಕ್ಷ ರು. ನಂತೆ ೧೬.೯೦ ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಅವರು ಮಂಗಳವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಸಭೆಯಲ್ಲಿ ಮಾಹಿತಿ ನೀಡಿದರು.ತೆಕ್ಕಾರಿನಲ್ಲಿ ನಿಗದಿಪಡಿಸಿದ ಜಾಗದಲ್ಲಿಯೇ ಉಪಕೇಂದ್ರ ನಿರ್ಮಾಣಗೊಳ್ಳಲಿದೆ. ಇಲ್ಲಿನ ವಾತಾರವಣಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಶಿಲಾನ್ಯಾಸ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜತ್ ಮಾತನಾಡಿ, ತಾಲೂಕಿನಲ್ಲಿ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 75 ಆರೋಗ್ಯ ಉಪಕೇಂದ್ರಗಳಿದೆ. 30 ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಸರ್ಕಾರಿ ಕಟ್ಟಡವಿಲ್ಲದೆ ಕಾರ್ಯಚರಿಸುತ್ತಿದ್ದು, ಇದೀಗ 26 ಕಟ್ಟಡಗಳಿಗೆ ಅನುದಾನ ಮಂಜೂರುಗೊಂಡಿದೆ ಎಂದು ತಿಳಿಸಿದರು.ಪ.ಪಂ. ಅಧ್ಯಕ್ಷ ಜಯಾನಂದ ಗೌಡ, ತಾ.ಪಂ. ಇಒ ಭವಾನಿಶಂಕರ್ ಎನ್., ಆರೋಗ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

* ಅನುದಾನ ಮಂಜೂರಾದ ಉಪಕೇಂದ್ರಗಳುಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ 2025-26ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಗಂಡಿಬಾಗಿಲು, ಸವಣಾಲು, ಇಂದಬೆಟ್ಟು-ಬಿ, ತೆಕ್ಕಾರು, ನಡ, ಬೆಳ್ತಂಗಡಿ-ಎ(ಮೇಲಂತಬೆಟ್ಟು), ಮಿತ್ತಬಾಗಿಲು, ವೇಣೂರು, ಬೆಳ್ತಂಗಡಿ-ಬಿ(ರೆಂಕೆದಗುತ್ತು), ಇಳಂತಿಲ, ಚಿಬಿದ್ರೆ, ಆರಂಬೋಡಿ, ಗರ್ಡಾಡಿ, ಹೊಸಂಗಡಿ, ಕಳೆಂಜ ಶಾಲೆತ್ತಡ್ಕ, ಕನ್ಯಾಡಿ-2 ಕರಾಯ, ಕೌಕ್ರಾಡಿ, ಕೊಯ್ಯರು-ಬಿ ಹಾಗೂ ಕುದ್ಯಾಡಿ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಅನುದಾನ ಮಂಜೂರಾಗಿ ಅನುಮೊದನೆಗೊಂಡಿದೆ. ಪಿ.ಎಂ.ಅಭೀಮ್ ಯೋಜನೆಯಡಿಯಲ್ಲಿ ಕುತ್ಲೂರು, ಲಾಯಿಲ-ಎ, ನಾಲ್ಕೂರು, ನ್ಯಾಯತರ್ಪು, ತೆಂಕಕಾರಂದೂರು ಹಾಗೂ ಪುದುವೆಟ್ಟು ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ.