ಸಾರಾಂಶ
ಚಿಕ್ಕಬಳ್ಳಾಪುರ : ಸಾಧಾರಣವಾಗಿ ಚಾಲ್ತಿಯಲ್ಲಿದೆ ರೋಗ ಬಂದರೆ ಮಾತ್ರ ಸಾವು ಸಂಭವಿಸಲು ಸಾಧ್ಯವಿಲ್ಲ. ಹಾಗೆಯೇ ಸಾವು ಬರಲು ರೋಗವೇ ಕಾರಣವಾಗಬೇಕಂತಿಲ್ಲ. ಕಳೆದ ಕೆಲವು ವರ್ಷಗಳಿನಿಂದ ಇಡೀ ಲೋಕದ ಜನರು ಭಯಭೀತರಾಗಿದ್ದಾರೆ ಎಂದು ಪ್ರಖ್ಯಾತ ಜನರಲ್ ಸರ್ಜನ್ ಡಾ.ಆಂಜಿನಪ್ಪ ತಿಳಿಸಿದರು.
ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ನಿವೃತ್ತ ಸರ್ಕಾರಿ ನೌಕರರ ಸಂಘದ ವತಿಯಿಂದ ಶನಿವಾರ ನಡೆದ ಮಾಹೆಗೊಮ್ಮೆ ಆರೋಗ್ಯ ಸಲಹೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆದರಿಕೆಯಿಂದ ಸ್ವಂತ ಶರೀರಕ್ಕೆ ರೋಗವನ್ನು ಆಹ್ವಾನಿಸುವಂತಾಗಿದೆ. ಕಾರಣ ಇವತ್ತು ದಿನಬೆಳಗಾದರೆ ವಯಸ್ಸಾದ ಮುದುಕರಿಂದ ಇಡಿದು ಸಣ್ಣ ಮಕ್ಕಳ ಬಾಯಲ್ಲೂ ಒಂದೇ ರೋಗದ ಮಾತು ಕೊರೋನಾ ಕೊರೋನಾ ಕೊರೋನಾ. ಆದರೆ ಯಾರಿಗೂ ಕೊರೋನಾ ಬಗ್ಗೆ ಭಯ ಬೇಡ ಮುನ್ನೆಚ್ಚರಿಕೆ ಇರಲಿ ಎಂದು ತಿಳಿಸಿದರು.
ಈ ಕೊರೋನ ರೋಗ ಜನರು ತಿಳಿದುಕೊಂಡಿರುವ ಹಾಗೆ ಅಷ್ಟೊಂದು ಭಯಾನಕ ರೋಗ ಅಲ್ಲಾ. ಇದು ಚೀನಾದಿಂದಲೂ ಬಂದಿಲ್ಲಾ. 50-60 ವರ್ಷಗಳಿಗೆ ಒಮ್ಮೆ ದೊಡ್ಡ ದೊಡ್ಡ ಕಾಯಿಲೆಗಳು ಬಂದು ಹೋಗುವುದು ಸಾಮಾನ್ಯವಾಗಿದೆ. 1975ರಲ್ಲಿ ನಾನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ವಿದ್ಯಾಭ್ಯಾಸ ಮಾಡುವಾಗ ಪಠ್ಯದಲ್ಲಿ ಕೊರೋನಾ ಬಗ್ಗೆ ತಿಳಿದಿದ್ದೆ. ಕೊರೋನ ಹೆಸರು ಕೇಳಿದಾಗಲೆಲ್ಲಾ ಜನರೇಕೆ ಅಷ್ಟೊಂದು ಭಯಬೀತರಾಗುತ್ತಾರೆ?. ಈ ಮೊದಲು ಅದೆಷ್ಟೊ ಭಯಾನಕ ರೋಗಗಳು ಬಂದು ಹೋಗಿವೆ.
ಇದು ಶೀತ, ಜ್ವರ ಉಸಿರಾಟದ ತೊಂದರೆ, ಕೆಮ್ಮು ಮೊದಲಾದ ಮಾದರಿಯ ರೋಗ ಲಕ್ಷಣಗಳಿಂದ ಕೊಡಿರುವ ರೋಗ ಇದಕ್ಕೆ ಹೆದರದೆ ಮಾಸ್ಕ್ ಧರಿಸಿ ಓಡಾಡಬೇಕು ಮತ್ತು ಕೈಗಳನ್ನು ಚನ್ನಾಗಿ ಸೋಪ್ ಹಾಕಿ ತೊಳೆದ ನಂತರ ಊಟ ತಿಂಡಿ ಮಾಡಬೇಕು. ಅಷ್ಟೇ, ಹಲವಾರು ಸಾಂಕ್ರಾಮಿಕ ರೋಗಗಳು ದೇಶದಲ್ಲಿ ಬಂದು ಹೋಗಿವೆ ಎಂದರು.ಕೊರೋನ ರೋಗ ಬಂದಾಗಿನಿಂದ ಈ ರೋಗ ಸೋಶಿಯಲ್ ಮೀಡಿಯಾಗಳಲ್ಲಿ, ಟಿ ವಿ ಚಾನೆಲ್ಗಳಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಬದಲಾಗಿ ಜನರಲ್ಲಿ ಭಯವನ್ನು ಹುಟ್ಟಿಸಿದ್ದಾರೆ. ಜನಸಾಮಾನ್ಯರು ಕೊರೋನ ರೋಗದ ಹೆಸರು ಕೇಳಿದಾಗಲೆಲ್ಲ ನೆಗೆದು ಬೀಳುವಂತಾಗಿದೆ. ಒಬ್ಬ ವ್ಯಕಿಯ ದೇಹದಲ್ಲಿ ಕೊರೋನ ವೈರಸ್ ಇದೆ ಎಂದಾದರೆ ಹೆದರಬೇಕಾಗಿಲ್ಲ. ಅದು ಸಾಧಾರಣ ಜ್ವರದ ಹಾಗೆ, ಜ್ವರ, ಶೀತ, ಕೆಮ್ಮ, ಗಂಟಲು ನೋವು, ಮೊದಲಾದ ಲಕ್ಷಣಗಳಿರುತ್ತದೆ.
ಇದು ವನ ಕೆಮ್ಮ , ತೀವ್ರವಾದ ತಲೆನೋವು, ವಾಂತಿ ಭೇದಿ, ಮುಂತಾದ ಲಕ್ಷಣಗಳು ಕಂಡು ಬಂದರೆ ಡಾಕ್ಟರ್ ಸಲಹೆ ಪಡೆಕೊಳ್ಳುವುದು ಉತ್ತಮ. ಶ್ವಾಸಕೋಶದ ತೊಂದರೆ, ಹೃದಯಕ್ಕೆ ಸಂಭದಿಸಿದ ಕಾಯಿಲೆಗಳು, ಕಿಡ್ನಿ ರೋಗ , ಮಧುಮೇಹ, ನ್ಯೂಮೋನಿಯ, ರೋಗ ಇರುವವರು, 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಾದವರು, ಸಣ್ಣ ಮಕ್ಕಳು ಅವರ ಆರೋಗ್ಯದ ಕಡೆ ಹೆಚ್ಚಿನ ಗಮನವಿಡಬೇಕಾಗಿದೆ ಎಂದು ಸಲಹೆ ನೀಡಿದರು.
ನಿವೃತ್ತರು ತಮ್ಮ ಇಳಿ ವಯಸ್ಸಿನಲ್ಲಿ ಯಾವುದೇ ಆಲೋಚನೆಗಳು ಇರಿಸಿಕೊಳ್ಳದೆ ಸದಾ ನಗುತ್ತಾ, ತಾಜಾ ಹಾಗೂ ಉತ್ತಮ ಆಹಾರ ಪದ್ಧತಿ ರೂಡಿಸಿಕೊಳ್ಳುತ್ತಾ ದೈಹಿಕ ಚಟುವಟಿಕೆಯಿಂದ ತಮ್ಮ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕು. ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವ ನೀವು ಇದ್ದ ಕಡೆಯೇ ಇರುವುದಕ್ಕಿಂತ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಇದರ ಜೊತೆಗೆ ಪ್ರತಿದಿನ ಹೆಚ್ಚು ನಡೆದಾಡುವ ಅಭ್ಯಾಸ ರೂಢಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು. ಅನೇಕ ಕಾಯಿಲೆಗಳ ಬಗ್ಗೆ ಮತ್ತು ಕಾಯಿಲೆಗಳಿಂದ ಹೇಗೆ ರಕ್ಷಸಿಕೊಳ್ಳಬೇಕು ಎಂಬಕುರಿತು ಮಾಹಿತಿ ನೀಡಿ, ನಿವೃತ್ತ ನೌಕರರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ನಿವೃತ್ತ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಎಲ್.ಬೈರಪ್ಪ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಎ.ನಾರಾಯಣಸ್ವಾಮಿ, ನಿವೃತ್ತ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ.ಬಿ.ವಿ. ಕೃಷ್ಣ,ಕಾರ್ಯದರ್ಶಿ ತಿರುಮಳಪ್ಪ, ಖಜಾಂಚಿ ಶ್ರೀನಿವಾಸರೆಡ್ಡಿ, ಸಂಘಟನಾ ಕಾರ್ಯದರ್ಶಿ ದಸ್ತಗಿರಿ ಸಾಬ್,ಮತ್ತಿತರರು ಇದ್ದರು.