ಸಾರಾಂಶ
ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾದ ನಂತರ ಇನ್ನಷ್ಟು ಸೌಲಭ್ಯ ದೊರೆಯುತ್ತವೆ. ಕುಡಿಯುವ ನೀರಿನ ವ್ಯವಸ್ಥೆಯು ಶೀಘ್ರದಲ್ಲಿಯೇ ಆಗಲಿದೆ. ಮನೆಗಳ ನಡುವೆಯೇ ಇರುವ ಸ್ಮಶಾನವನ್ನು ತೆರವುಗೊಳಿಸಿ ಅಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಚಿಂತನೆ ಇದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ. ಪುರಸಭೆ ತೆರಿಗೆ ಅನುದಾನದಲ್ಲಿ ಪ್ರತಿವರ್ಷ ಸುಮಾರು ಏಳು ಕೋಟಿ ರು. ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು. ಹೊಸ ಬಡಾವಣೆಗಳ ನಾಗರಿಕರು ಅಲ್ಲಿನ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಹೊಸ ಬಡಾವಣೆಗಳ ನಾಗರಿಕರು ಅಲ್ಲಿನ ಅಭಿವೃದ್ಧಿಗೆ ಪುರಸಭೆಯೊಂದಿಗೆ ಸಹಕರಿಸಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.ಪಟ್ಟಣದ ನವೋದಯ ಶಾಲೆ ಹಿಂಭಾಗದ ರಸ್ತೆಯಲ್ಲಿರುವ ತಂಗ್ಯಮ್ಮ ಬಡಾವಣೆಯವರೆಗೆ ನಾಲ್ಕು ಕಿ.ಮೀ. ಕಾನ್ವೆಂಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು. ವೆಂಕಟೇಶ್ವರ ಬಡಾವಣೆ ಮತ್ತು ಬಡಾವಣೆಯಲ್ಲಿ ಶೇಕಡ ೪೦ರಷ್ಟು ಮನೆಗಳು ನಿರ್ಮಾಣವಾಗಿವೆ. ಇತ್ತೀಚೆಗೆ ಜನಸಂದಣಿ ಹೆಚ್ಚಾಗಿದ್ದು, ಇಲ್ಲಿಗೆ ಹಂತ ಹಂತವಾಗಿ ನಾಗರಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಭಾಗದಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ೫೦೦ ಮಂದಿ ವಿದ್ಯಾರ್ಥಿನಿಯರಿದ್ದು, ಅವರ ಸಂಚಾರ ಪ್ರಯೋಜನವಾಗಿದೆ ಎಂದರು.
ಪೂರ್ಣ ಪ್ರಮಾಣದಲ್ಲಿ ಮನೆಗಳು ನಿರ್ಮಾಣವಾದ ನಂತರ ಇನ್ನಷ್ಟು ಸೌಲಭ್ಯ ದೊರೆಯುತ್ತವೆ. ಕುಡಿಯುವ ನೀರಿನ ವ್ಯವಸ್ಥೆಯು ಶೀಘ್ರದಲ್ಲಿಯೇ ಆಗಲಿದೆ. ಮನೆಗಳ ನಡುವೆಯೇ ಇರುವ ಸ್ಮಶಾನವನ್ನು ತೆರವುಗೊಳಿಸಿ ಅಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಚಿಂತನೆ ಇದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ. ಪುರಸಭೆ ತೆರಿಗೆ ಅನುದಾನದಲ್ಲಿ ಪ್ರತಿವರ್ಷ ಸುಮಾರು ಏಳು ಕೋಟಿ ರು. ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಸಿ. ಎನ್. ಮೋಹನ್, ಉಪಾಧ್ಯಕ್ಷೆ ರಾಣೆಕೃಷ್ಣ, ಸಾಯಿ ಸಮಿತಿ ಅಧ್ಯಕ್ಷೆ ಫರಾನ, ಜಗದೀಶ್, ಶಂಕರೇಗೌಡ ಮತ್ತಿತರರು ಹಾಜರಿದ್ದರು.