ಶ್ರೀಬಸವೇಶ್ವರ ಬ್ಯಾಂಕಿಗೆ ₹1 ಕೋಟಿ ನಿವ್ವಳ ಲಾಭ

| Published : Aug 18 2025, 12:01 AM IST

ಸಾರಾಂಶ

ಗ್ರಾಹಕರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಬೇಕು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣದ ಶ್ರೀಬಸವೇಶ್ವರ ಕೋ-ಆಪರೇಟಿವ್‌ ಬ್ಯಾಂಕ್‌ ಎಲ್ಲ ಸದಸ್ಯರ, ಸಿಬ್ಬಂದಿ ಹಾಗೂ ನಿರ್ದೇಶಕರ ಶ್ರಮದಿಂದ ೨೦೨೪-೨೫ ನೇ ಹಣಕಾಸು ವರ್ಷದಲ್ಲಿ ಒಟ್ಟು ₹೩೫,೧೩೨.೩೭ ವ್ಯವಹಾರ ಮಾಡಿ ₹೧.೧ ಕೋಟಿ ನಿವ್ಹಳ ಆದಾಯ ಗಳಿಸಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಲೋಕನಾಥ ಅಗರವಾಲ ಹೇಳಿದರು.

ಪಟ್ಟಣದ ಪಂಚಾಚಾರ್ಯ ಜನಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬ್ಯಾಂಕಿನ ೬೧ನೇ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕಿನಲ್ಲಿ ಪ್ರಸ್ತುತ ೩,೨೫೬ ಸಾಮಾನ್ಯ ಸದಸ್ಯರು, ೩,೨೭೨ ಸಹ ಸದಸ್ಯರಿದ್ದಾರೆ. ₹೩೪೮.೮೨ ಲಕ್ಷ ಶೇರು ಬಂಡವಾಳ, ₹೪೧೦.೧೩ ಲಕ್ಷ ಕಾಯ್ದಿಟ್ಟ ನಿಧಿ ಹಾಗೂ ಇತರೆ ನಿಧಿಗಳು ಸೇರಿ ಒಟ್ಟು ₹೯೫೬.೪೯ ಲಕ್ಷ ಹೊಂದಿದೆ. ಗ್ರಾಹಕರಿಂದ ₹೧೦,೩೩೮.೧೯ ಲಕ್ಷ ಠೇವುಗಳು ಹೊಂದಿದೆ. ದುಡಿಯುವ ಬಂಡವಾಳ ₹೧೨,೦೯೦.೯೭ ಲಕ್ಷ ಇದೆ. ೨೦೨೫ರ ವರ್ಷಾಂತ್ಯಕ್ಕೆ ಸಾಲ ಬಾಕಿ ₹೬,೮೩೧.೬೨ ಲಕ್ಷವಿದೆ. ಇದರ ಪೈಕಿ ಒಟ್ಟು ೮೧ ಸಾಲಗಾರರಿಂದ ಮುದ್ದತ್ ಮೀರಿದ ಬರತಕ್ಕ ಮೊತ್ತ ₹೩೫೫.೪೨ ಲಕ್ಷವಿದೆ. ಇದು ಶೇ.೫.೨೦ರಷ್ಟಿದೆ. ಪ್ರಸ್ತಕ ಸಾಲಿನಲ್ಲಿ ₹೭೫೬.೩೨ ಲಕ್ಷ ಸಾಲ ವಿತರಿಸಲಾಗಿದೆ. ಅನುತ್ಪಾದಕ ಸಾಲದ ಮೊತ್ತ ₹೮೫.೮೫ ರಷ್ಟಿದೆ. ಜುಲೈ೧ ರಿಂದ ಬ್ಯಾಂಕಿನ ಎಲ್ಲ ಸದಸ್ಯ ಸಾಲಗಾರರಿಗೆ ಅಪಘಾತ ವಿಮೆ ಹಾಗೂ ಲಾಕರ್ ವಿಮೆ ಒದಗಿಸಲಾಗಿದೆ. ಬ್ಯಾಂಕಿನಲ್ಲಿ ಆರ್‌ಟಿಜಿಎಸ್, ನೆಪ್ಟ್ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ ಎಟಿಎಂ, ಯುಪಿಆರ್ ಮೊಬೈಲ್ ಬ್ಯಾಂಕ್ ಸೌಲಭ್ಯ ಆರಂಭಿಸಲಾಗುವುದು ಎಂದು ಹೇಳಿದರು.

ಗ್ರಾಹಕರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ ಅಭಿವೃದ್ಧಿಗೆ ಸಹಕರಿಸಬೇಕು. ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ಸಾಮಾನ್ಯ ಸಭೆ ಉದ್ಘಾಟಿಸಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, 5 ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್‌, ಬಸವನಬಾಗೇವಾಡಿ, ಹೂವಿನಹಿಪ್ಪರಗಿ ಶಾಖೆಗಳಲ್ಲಿ ಉತ್ತಮ ವ್ಯವಹಾರವಿದೆ. ಉಳಿದ ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿಯ ಮಹಿಳಾ ಶಾಖೆಯಲ್ಲಿ ಅಷ್ಟಾಗಿ ವ್ಯವಹಾರವಾಗುತ್ತಿಲ್ಲ. ಇದರ ಕಡೆಗೆ ಬ್ಯಾಂಕಿನ ಆಡಳಿತ ಮಂಡಳಿಯವರು ಗಮನ ಹರಿಸಬೇಕು. ಆಡಳಿತ ಮಂಡಳಿಯವರು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದರೆ ಸಹಕಾರಿಗಳು ಮಾತ್ರ ಉಳಿಯಲು ಸಾಧ್ಯ ಎಂದರು.

ರಾಜ್ಯ ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿದರು. ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ಸಿ.ಎಸ್.ತಳ್ಳೊಳ್ಳಿ ವರದಿ ವಾಚಿಸಿದರು. ವೇದಿಕೆಯಲ್ಲಿ ಜನತಾ ಬಜಾರ್‌ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ಬ್ಯಾಂಕ್‌ ಉಪಾಧ್ಯಕ್ಷ ಬಸವರಾಜ ಗೊಳಸಂಗಿ, ನಿರ್ದೇಶಕ ಶಂಕರಗೌಡ ಬಿರಾದಾರ, ಉಮೇಶ ಹಾರಿವಾಳ, ಅನಿಲ ದುಂಬಾಳಿ, ಜಗದೀಶ ಕೊಟ್ರಶೆಟ್ಟಿ, ಸಿದ್ರಾಮಪ್ಪ ಕಿಣಗಿ, ಶ್ರೀಶೈಲ ಪತ್ತಾರ, ಶಿವಾನಂದ ಪಟ್ಟಣಶೆಟ್ಟಿ, ನೀಲಪ್ಪ ನಾಯಕ, ಕಮಲಾಬಾಯಿ ತಿಪ್ಪನಗೌಡರ, ಸುರೇಖಾ ಪಡಶೆಟ್ಟಿ, ಯಮನಪ್ಪಗೌಡ ಪಾಟೀಲ, ಭೀಮನಗೌಡ ಪಾಟೀಲ, ರಾಜಶೇಖರ ಗುತ್ತರಗಿಮಠ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸಿ.ಎಸ್.ತಳ್ಳೊಳ್ಳಿ ಇದ್ದರು. ಎಸ್.ಎಸ್.ಮಂಟೂರ ಪ್ರಾರ್ಥಿಸಿದರು. ಶಂಕರಗೌಡ ಬಿರಾದಾರ ಸ್ವಾಗತಿಸಿದರು. ಲೆಕ್ಕಿಖ ರಾಘವೇಂದ್ರ ಚಿಕ್ಕೊಂಡ ನಿರೂಪಿಸಿದರು. ಜಗದೀಶ ಕೊಟ್ರಶೆಟ್ಟಿ ವಂದಿಸಿದರು.