ಅಂಧ-ಅನಾಥರ ಬಾಳು ಬೆಳಗಿದವರು ಪಂ. ಪುಟ್ಟರಾಜರು: ಪ್ರಭುಲಿಂಗ ದೇವರು

| Published : Sep 14 2025, 01:04 AM IST

ಅಂಧ-ಅನಾಥರ ಬಾಳು ಬೆಳಗಿದವರು ಪಂ. ಪುಟ್ಟರಾಜರು: ಪ್ರಭುಲಿಂಗ ದೇವರು
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನೊಳಗೆ ಸಾವಿರಾರು ಅಂಧ–ಅನಾಥ ಬಡಮಕ್ಕಳು ಭಿಕ್ಷಾ ಪಾತ್ರೆ ಬಿಟ್ಟು ಅಕ್ಷಯ ಪಾತ್ರೆ ಹಿಡಿದುಕೊಂಡು ಪ್ರಸಾದ ಸೇವಿಸುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸಂಗೀತದ ಅಕ್ಷಯ ಪಾತ್ರೆ ನೀಡಿದ ಪಂ.ಪುಟ್ಟರಾಜ ಕವಿ ಗವಾಯಿಗಳು ಎಂದು ನೀಲಗುಂದ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗ ದೇವರು ಹೇಳಿದರು.

ಲಕ್ಷ್ಮೇಶ್ವರ:ನಾಡಿನೊಳಗೆ ಸಾವಿರಾರು ಅಂಧ–ಅನಾಥ ಬಡಮಕ್ಕಳು ಭಿಕ್ಷಾ ಪಾತ್ರೆ ಬಿಟ್ಟು ಅಕ್ಷಯ ಪಾತ್ರೆ ಹಿಡಿದುಕೊಂಡು ಪ್ರಸಾದ ಸೇವಿಸುತ್ತಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಸಂಗೀತದ ಅಕ್ಷಯ ಪಾತ್ರೆ ನೀಡಿದ ಪಂ.ಪುಟ್ಟರಾಜ ಕವಿ ಗವಾಯಿಗಳು ಎಂದು ನೀಲಗುಂದ ಗುದ್ನೇಶ್ವರ ಮಠದ ಶ್ರೀ ಪ್ರಭುಲಿಂಗ ದೇವರು ಹೇಳಿದರು. ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗದಗ ಹಾಗೂ ಶ್ರೀಗುರು ಪುಟ್ಟರಾಜ ಸಂಗೀತ ಶಿಕ್ಷಣ ಸಮಿತಿ ಯಳವತ್ತಿ ಸಹಯೋಗದಲ್ಲಿ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಮಹಾತ್ಮರ ಬದುಕು-ಬೆಳಕು ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಳವತ್ತಿ ಗ್ರಾಮದಲ್ಲಿ ಪಂ. ಪುಟ್ಟರಾಜ ಶಿವಯೋಗಳ 15ನೇ ಪುಣ್ಯಸ್ಮರಣೆ ಮಾಡುತ್ತಿರುವುದು ಸಂತೋಷ ತಂದಿದೆ. ಈ ನಾಡಿನಲ್ಲಿ ಸಂಗೀತ ಜೀವಂತ ಇದೆ ಎಂದರೆ ಅದರ ಹಿಂದೆ ಶ್ರೀಗುರು ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು ತಮ್ಮ ಜೀವನ ಗಂಧದ ಕೋರಡಿನಂತೆ ಸವಿಸಿದ್ದಾರೆ. ಇಡಿ ಜೀವನ ಸಮಾಜಕ್ಕಾಗಿ ಸಮರ್ಪಣೆ ಮಾಡಿದ ಉಭಯ ಗವಾಯಿಗಳು ಆಗಿದ್ದಾರೆ. ಅವರ ಸೇವಾ ಮಾಡಿ ಗುರುವಿನ ಋಣಬಾರ ತೀರಿಸುವ ಭಾಗ್ಯ ಯಳವತ್ತಿ ಗ್ರಾಮಸ್ಥರಿಗೆ ಒದಗಿ ಬಂದಿದೆ ಎಂದರು. ಪ್ರವಚನಕಾರ ಶರಣ ಶಿವಲಿಂಗಯ್ಯಶಾಸ್ತ್ರಿ ಸಿದ್ದಾಪೂರ ಮಾತನಾಡಿ, ಮಹಾತ್ಮರನ್ನು ನೆನೆಯುವುದೇ ಘನಮುಕ್ತಿ ಪದಂ ಶಿವಾಧವ ಅಂದರೆ ಮಹಾತ್ಮರನ್ನು, ಶರಣರನ್ನು, ಸಂತರನ್ನು ಪ್ರತಿದಿನ ನೆನೆಯುವುದೇ ಆದರೆ ನಮ್ಮ ಮನಸ್ಸಿನ ತಾಪ, ಕೋಪ, ಮಾಯಾ, ಒತ್ತಡ, ಮನಸ್ಸಿನ ಮಲೀನತೆ ದೂರವಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವದು. ಯಳವತ್ತಿ ಗ್ರಾಮಸ್ಥರು ಪಂ. ಪುಟ್ಟರಾಜ ಕವಿ ಗವಾಯಿಗಳವರ ಬಗ್ಗೆ ಅಪಾರ ಭಕ್ತಿ, ಶೃದ್ದೆ, ನಿಷ್ಠೆ ಹೊಂದಿ ಈ ಗ್ರಾಮದಲ್ಲಿ ಭಕ್ತಿ ಮಾರ್ಗದಲ್ಲಿ ಹೆಜ್ಜೆಯನ್ನು ಹಾಕುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಹಿರೇಮಠದ ಶ್ರೀಸಿದ್ದಲಿಂಗಯ್ಯ ಸ್ವಾಮಿಗಳು, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಚನಗೌಡ್ರ ಅಜ್ಜನಗೌಡ್ರ, ಹೇಮಣ್ಣ ಬೆಟಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಈರಣ್ಣ ಹತ್ತಿಕಾಳ ನಿರೂಪಿಸಿ, ವಂದಿಸಿದರು. ಸಂಗೀತ ಸೇವೆಯನ್ನ ಬಾಗೇಶ ರಾಣಾಪೂರ, ತಬಲಾ ಸಾಥ್ ಸಿದ್ದೇಶಕುಮಾರ ಲಿಂಗನಬಂಡಿ ಅವರು ನೀಡಿದರು.