ಕುಮಟಾ: ಹೆಬ್ಬಾವು ಕೊಲ್ಲಲು ಹೋದ ವ್ಯಕ್ತಿ ನಾಡ ಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ಸಾವು

| Published : Sep 01 2024, 10:21 AM IST

 rain death

ಸಾರಾಂಶ

ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ.

ಕುಮಟಾ:  ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ. 

ಶುಕ್ರವಾರ ತಡರಾತ್ರಿ ಕೋಳಿ ಶೆಡ್ಡಿನಲ್ಲಿ ಹೆಬ್ಬಾವು ಸಾಯಿಸಲು ನಾಡಬಂದೂಕು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಫೈರ್‌ ಆಗಿದ್ದರಿಂದ ಗುಂಡು ಹಣೆಗೆ ತಗುಲಿ ಸಾವಿಗೀಡಾಗಿದ್ದಾರೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮನೆಯಲ್ಲಿದ್ದ ಬಂದೂಕು ಅನಧಿಕೃತ ಎಂದು ತಿಳಿದು ಬಂದಿದೆ.