ಡಾ.ಎಂ.ಮಹೇಶ್ ಕಳಲೆ ಅವರು ಕಿನ್ನರ ರೆಕ್ಕೆ- ಎಚ್ಚೆಸ್ವಿ ಮಕ್ಕಳ ಸಾಹಿತ್ಯ ವಿವೇಚನೆ ಎಂಬು ಕೃತಿಯನ್ನು ಹೊರತಂದಿದ್ದಾರೆ. ಇದು ಅವರ ಎಂ.ಫಿಲ್ ಸಂಶೋಧನಾ ಪ್ರಬಂಧದ ಸಂಕ್ಷಿಪ್ತ ರೂಪ. ಆರಂಭದಲ್ಲಿ ಅವರು ಎಚ್ಚೆಸ್ವಿ ಅವರ ಬದುಕು- ಬರೆಹ- ಸಾಧನೆಯನ್ನು ದಾಖಲಿಸಿದ್ದಾರೆ. ಅದರಲ್ಲಿ ಬಾಲ್ಯ, ಶಿಕ್ಷಣ, ಕೃತಿಗಳು, ಸಿನಿಮಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಪ್ರಶಸ್ತಿ ಪುರಸ್ಕಾರಗಳ ವಿವರಗಳಿವೆ.