ರೈತರಿಗೆ ಕಾರ್ಖಾನೆ ಉಳಿಸುವ ಕಳಕಳ ಬರಲಿ
Sep 15 2025, 01:01 AM ISTಕನ್ನಡಪ್ರಭ ವಾರ್ತೆ ಇಂಡಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರ ಆಸ್ತಿ, ಅದನ್ನು ಉಳಿಸಿ, ಬೆಳೆಸುವುದು ರೈತರ ಕೆಲಸ. ಕಾರ್ಖಾನೆ ಉಳಿಯಬೇಕಾದರೆ ಅವಧಿ ಪೂರ್ಣಗೊಂಡ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸಬೇಕು ಎಂದು ಪದೇ ಪದೇ ಮನವಿ ಮಾಡಿಕೊಂಡಿದ್ದೇನೆ. ರೈತರ ಬಳಿ ಕಾರ್ಖಾನೆಯ ಉಳಿಸುವ ಬಗ್ಗೆ ಕಳಕಳಿ ಇಲ್ಲವಾದರೆ, ಕಾರ್ಖಾನೆಯನ್ನು ಯಾರು ಬೇಕಾದರೂ ನಡೆಸಿಕೊಂಡು ಹೋಗಬಹುದು ಎಂದು ಕಾರ್ಖಾನೆಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟಿಲ ಹೇಳಿದರು.