ಪಕ್ಷದಿಂದ ರಾಗಾರನ್ನು ಖರ್ಗೆ ಉಚ್ಛಾಟನೆ ಮಾಡಲಿ
Sep 16 2024, 01:46 AM ISTಕನ್ನಡಪ್ರಭ ವಾರ್ತೆ ವಿಜಯಪುರ ಮೀಸಲಾತಿ ತೆಗೆದು ಹಾಕುತ್ತೇವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆಯನ್ನು ಬಿಜೆಪಿ ಎಸ್ಸಿ ಪೋರ್ಚಾ ಘಟಕ ಖಂಡಿಸುತ್ತಿರುವುದಾಗಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸೆ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ರಾಹುಲಗಾಂಧಿ ಅವರು ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆ ನೀಡುವುದು ಕೆಲಸ ಖಂಡನೀಯ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಕೊಟ್ಟಿರುವ ಮೀಸಲಾತಿ ದಲಿತರ ಹಕ್ಕು ಅದು ಕಾಂಗ್ರೆಸ್ನ ಭಿಕ್ಷೆಯಲ್ಲ. ಅದನ್ನು ಅರಿತುಕೊಳ್ಳದ ರಾಹುಲ ಗಾಂಧಿ ಅವರು ಅಪ್ರಭುದ್ಧತೆ ಹೇಳಿಕೆ ಕೊಡುತ್ತಿದ್ದಾರೆ.