ಚನ್ನಗಿರಿ ಪಟ್ಟಣದಲ್ಲಿ ಮುಗಿಯದ ಯುಜಿಡಿ ಕಾಮಗಾರಿ: ರಸ್ತೆಗಳೆಲ್ಲವೂ ಕೆಸರುಮಯ
Jun 18 2025, 12:56 AM ISTಪಟ್ಟಣದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಜಿನುಗುತ್ತಿರುವ ಮಳೆಯಿಂದ ಪಟ್ಟಣದ ಬಸವೇಶ್ವರ ನಗರ, ಮುರುಘರಾಜೇಂದ್ರ ಬಡಾವಣೆ, ಚರ್ಚ್ ರಸ್ತೆ, ವಡ್ನಾಳ್ ರಾಜಣ್ಣ ಬಡಾವಣೆ, ಸಂತೆ ರಸ್ತೆ ಈ ಪ್ರದೇಶಗಳಲ್ಲಿನ ಸಂಪರ್ಕ ರಸ್ತೆಗಳು ಕೆಸರಿನಿಂದ ಕೂಡಿವೆ. ಸುರಕ್ಷಿತವಾಗಿ ಸಂಚರಿಸಲು ಬಾರದಂತಹ ಸ್ಥಿತಿ ತಲುಪಿವೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು ಬೀಳುತ್ತಾ, ಏಳುತ್ತಾ ಸಾಗುವಂಥ ದುಸ್ಥಿತಿ ನಿರ್ಮಾಣವಾಗಿದೆ.