. ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆ ಇಟ್ಟುಕೊಂಡಿದ್ದೀರಿ, ಆದರೆ, ಪಕ್ಷ ಉಪಮುಖ್ಯಮಂತ್ರಿ ಮಾಡಿದ್ದು, ಯಾರೂ ಹತಾಶರಾಗಬೇಡಿ - ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ನಮ್ಮ ಸರ್ಕಾರ ಕೇವಲ ಐದು ವರ್ಷವಲ್ಲ, ಮುಂದಿನ 10 ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ. ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಜಿಲ್ಲೆಗೆ ಕೊಟ್ಟಿರುವಂತಹ ಕೊಡುಗೆ ಏನು? ಕೊಡುಗೆಯ ಬುರುಡೆ ಇದ್ರೆ ತೋರಿಸಿ?
ರಾಮನಗರಕ್ಕೆ ಬಂದ ದೇವೇಗೌಡರು ಮತ್ತು ಕುಟುಂಬ ಅಧಿಕಾರ ಉಂಡು ಕೊಟ್ಟ ಕೊಡುಗೇ ಏನು?, ಇದೀಗ ಮಂಡ್ಯ ಜಿಲ್ಲೆ ನಮ್ಮದು ಎನ್ನುತ್ತಿದ್ದಾರೆ. ಕಳೆದ ವರ್ಷ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಜೆಡಿಎಸ್ ವಿರುದ್ಧ ಇದು ಕುಟುಂಬದ ಪ್ರೈವೆಟ್ ಲಿಮಿಟೆಡ್ ಎಂದಿದ್ದರು. ಈಗ ಅವರ ಜೊತೆಯೇ ನೆಂಟಸ್ಥನ ಬೆಳೆಸಿದ್ದಾರೆ.