ಬಲಮುರಿ ಗಣಪತಿ ದೇವಾಲಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

Oct 25 2025, 01:00 AM IST
ಶ್ರೀಲಕ್ಷ್ಮೀ ಬಡಾವಣೆಯಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ನಿರ್ವಿಘ್ನ ಬಲಮುರಿ ಗಣಪತಿಯನ್ನು ಲೋಕಾರ್ಪಣೆಗೊಳಿಸಲಾಗುವುದು. ಬಡಾವಣೆಯ ನಿವಾಸಿಗಳಿಗೆ ಸುತ್ತಮುತ್ತ ದೇವಸ್ಥಾನ ಇಲ್ಲದೆ ಪಟ್ಟಣಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಮನಗಂಡು ಬಡಾವಣೆಯ ಪ್ರಮುಖರು ದೇವಸ್ಥಾನ ನಿರ್ಮಾಣ ಮಾಡಲು ಮುಂದಾದರು. ಪಟ್ಟಣದಲ್ಲೇ ಪ್ರಥಮ ಬಾರಿಗೆ ನಿರ್ವಿಘ್ನ ಗಣಪತಿ ಸ್ಥಾಪಿಸಲಾಗುತ್ತಿದ್ದು, ೪೦ ಅಡಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಗ್ರಾಮದೇವತೆ ವಳಗೇರಮ್ಮ ದೇವಿಯ ವೈಭವಪೂರ್ಣ ಉತ್ಸವದೊಂದಿಗೆ ಶ್ರೀಲಕ್ಷ್ಮೀ ಬಡಾವಣೆಗೆ ಆಗಮಿಸಲಿದ್ದು ಮಂಗಳವಾದ್ಯ, ಚಂಡಿವಾದ್ಯ, ಕೋಲಾಟ ಮೆರವಣಿಗೆಗೆ ಮೆರುಗು ನೀಡಲಿದೆ.