ನಿರಂತರ ವಿದ್ಯುತ್, ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
May 15 2024, 01:32 AM ISTನದಿಯಲ್ಲಿ ನೀರಿದ್ದರೂ ಕರೆಂಟ್ ಇಲ್ಲದೇ ರೈತರ ಬೆಳೆಗಳು ಒಣಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ನದಿ ತೀರದ ರೈತರ ಪಂಪ್ಸೆಟ್ಗಳಿಗೆ ದಿನಾಲೂ 7 ಗಂಟೆ ನಿರಂತರ ಥ್ರಿಫೆಸ್ ವಿದ್ಯುತ್ ನೀಡಬೇಕು ಮತ್ತು ಬರ ಪರಿಹಾರದಲ್ಲಾಗಿರುವ ಲೋಪಗಳನ್ನು ಸರಿ ಪಡಿಸಿ ಎಲ್ಲ ರೈತರಿಗೂ ಬರ ಪರಿಹಾರ ನೀಡಬೇಕೆಂದು ಆಗ್ರಹಿಸಿ ತಾಲೂಕಿನ ಉಗಾರ ಬುದ್ರಕ್, ಮೊಳವಾಡ, ಕುಸನಾಳ ಗ್ರಾಮಗಳ ರೈತರು ಮತ್ತು ನವಚಿಗುರು ರೈತ ಸಂಘಟನೆಯವರು ಸೇರಿ ಉಗಾರ ಬುದ್ರಕ್ ಗ್ರಾಮದ ಮಹಾವೀರ ವೃತ್ದಲ್ಲಿ ಮಂಗಳವಾರ ಕಾಗವಾಡ-ಜಮಖಂಡಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.