ಚೀಟಿ ಹಣ ಕೊಡದ ಕೊಡಚಾದ್ರಿ ಚಿಟ್‌ ಫಂಡ್‌ ವಿರುದ್ಧ ಪ್ರತಿಭಟನೆ

Mar 11 2025, 12:49 AM IST
ಕೊಡಚಾದ್ರಿ ಫೈನಾನ್ಸ್‌ನವರು ಪಿಗ್ನಿ ರೂಪದಲ್ಲಿ ಸಂಗ್ರಹಿಸಿರುವ ಹಣವನ್ನು ಬಡ್ಡಿ ಸಮೇತ ವಾಪಸ್‌ ಕೊಡದಿದ್ದರೆ ಬ್ಯಾಂಕಿಗೆ ಬೀಗ ಹಾಕುವುದಾಗಿ ಸಿಐಟಿಯು ಮುಖಂಡ ಮಂಜುನಾಥ್ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಸಿ. ಜಿ. ರವಿ ತಿಳಿಸಿದರು. ಜನರ ಹಣ ಪಡೆದ ಬ್ಯಾಂಕ್‌ಗಳು ಜನರು ಕೇಳಿದಾಗ ವಾಪಸ್ ಹಣ ನೀಡದೆ ಮೇಲಧಿಕಾರಿಗಳ ಅನುಮತಿ ಬಂದಿಲ್ಲ, ನೀವು ಸರಿಯಾದ ಸಮಯಕ್ಕೆ ಹಣ ಕಟ್ಟಿಲ್ಲ ಹೀಗೆ ಅನೇಕ ಕಾರಣಗಳನ್ನು ನೀಡಿ ಬಡ ಜನರು ಸಾಲ ಸೋಲ ಮಾಡಿ ಒಂದೊಂದು ರುಪಾಯಿಗಳನ್ನು ಕೂಡಿಸಿ ಬ್ಯಾಂಕಿಗೆ ಬಂದು ಹಣ ಕಟ್ಟಿದ್ದನ್ನು ವಾಪಸ್ ನೀಡದೆ ಜನರಿಗೆ ತೊಂದರೆ ನೀಡುವ ಇಂತಹ ಬೇಜವಾವ್ದಾರಿ ಅಕ್ರಮ ಬ್ಯಾಂಕ್‌ಗಳಿಗೆ ಬೀಗ ಹಾಕಬೇಕು ಎಂದು ಆಗ್ರಹಿಸಿದರು.