ಜಾತಿವಾರು ಸಮೀಕ್ಷೆ-2015ರ ವರದಿಯಲ್ಲಿ ಕುರುಬ ಮತ್ತು ಉಪಜಾತಿಗಳು, ಸವಿತಾ ಸಮಾಜ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ 2-ಎ ದಿಂದ ತೆಗೆದು ಅತ್ಯಂತ ಹಿಂದುಳಿದ ಎಂದು ಮರು ವರ್ಗೀಕರಣ ಮಾಡಿ ಪ್ರವರ್ಗ 1-ಬಿ ಗೆ ಸೇರಿಸಲು ಶಿಫಾರಸು ಮಾಡಲಾಗಿದೆ.
ಭಾರತದ ಬಹುಪಾಲು ಮೂಲಭೂತ ಸಮಸ್ಯೆಗಳಿಗೆ ಅಂಬೇಡ್ಕರರ ಸಂದೇಶವನ್ನು, ಬೋಧನೆಗಳನ್ನು ಮೂಲ ರೂಪದಲ್ಲಿ ತಲುಪಿಸುವುದು ಪರಿಹಾರದ ಕಾರ್ಯವಾಗುತ್ತದೆ. ‘ನಾನು ಮೊದಲು ಭಾರತೀಯ ಕಡೆಗೂ ಭಾರತೀಯ’ ಎಂಬ ಉದ್ಗೋಷ ಮಾಡಿದ ಏಕೈಕ ಭಾರತೀಯ ಅದು ಬಾಬಾ ಸಾಹೇಬರು’
ಅಂಬೇಡ್ಕರ್ ಅವರನ್ನು ಉಲ್ಲೇಖಿಸುವಾಗ ನಾವು ಕೇವಲ ಸಂವಿಧಾನ ಶಿಲ್ಪಿ ಎಂದರೆ ಸಾಲುವುದಿಲ್ಲ, ಮಹಾನ್ ಮಾನವತಾವಾದಿ ಎಂದರೂ ಪೂರ್ಣವಾಗುವುದಿಲ್ಲ, ಒಬ್ಬ ವ್ಯಕ್ತಿ ಏನೆಲ್ಲ ಆಗಬಹುದು, ಸಮಾಜಕ್ಕೆ ಏನೆಲ್ಲ ಒಳಿತು ಮಾಡಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ಜೀವಿಸಿದವರು.
ಭಾರತದ ಇತಿಹಾಸದಲ್ಲಿ ʻಮಹಾಡ್ ಕೆರೆಯ ಪ್ರಸಂಗʼ ಮಹತ್ವದ್ದಾಗಿದೆ. ಮಹಾರಾಷ್ಟ್ರದ (ಆಗ ಬಾಂಬೆ ಪ್ರಾಂತ್ಯಕ್ಕೆ ಒಳಪಟ್ಟಿತ್ತು) ಮಹಾಡ್ನಲ್ಲಿನ ಕೆರೆಯ ನೀರನ್ನು ದಲಿತರು ಮುಟ್ಟಲೂ ಅವಕಾಶವಿಲ್ಲದ ಸಂದರ್ಭದಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಅವರು ಚೌಡರ್ ಕೆರೆಯಲ್ಲಿ ನೀರು ಕುಡಿದರು.
ಕಟ್ಟಿಗೆ ಒಲೆ ಹಚ್ಚಿ ರೂಢಿಯೇ ಇಲ್ಲದ ಮಹಿಳಾಮಣಿಗಳಿಗೆ ಒಲೆ ಹಚ್ಚುವುದು ಕಷ್ಟ ಕಷ್ಟ ಎನ್ನುವಂತಾಯಿತು. ಪ್ರತಿ ಬಾರಿ ಹಚ್ಚಿದಾಗಲೂ ಕ್ಷಣಾರ್ಧದಲ್ಲಿ ಬೆಂಕಿ ಮಾಯ. ಕ್ಯಾಮೆರಾ ಕಣ್ಣುಗಳೆಲ್ಲ ತಮ್ಮನ್ನೇ ದಿಟ್ಟಿಸಿವೆ. ಹೀಗಾಗಿ ಚಪಾತಿ ಸುಡದೆ ಬಿಡುವಂತಿಲ್ಲ.
ಸೇವಾದಳ ಕಾಂಗ್ರೆಸ್ ಪಕ್ಷದ ಆಧಾರಸ್ತಂಭ. ಪಕ್ಷದಲ್ಲಿ ನೀವು ಎಲ್ಲರಿಗಿಂತ ಕೊನೆ ಎಂಬ ಭಾವನೆ ಬೇಡ. ತಾಲೂಕು, ಜಿಲ್ಲಾ ಮಟ್ಟದಲ್ಲಿ ಸೇವಾದಳದವರಿಗೂ ಅಧಿಕಾರ ನೀಡುವ ಚಿಂತನೆ ನಡೆಸಿದ್ದೇವೆ ಎಂದು ಕಾಂಗ್ರೆಸ್ನ ಸೇವಾದಳ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ದಲಿತ ಜನಪದ ಕಲಾವಿದರ ಬದುಕು ಮತ್ತು ಸಾಧನೆ ದಾಖಲಿಸುವ ಡಿಜಿಟಲ್ ಆತ್ಮಕಥೆ ಯೋಜನೆ ರೂಪುಗೊಂಡು ದಶಕ ಕಳೆದರು ಇಂದಿಗೂ ಸಾಕಾರಗೊಂಡಿಲ್ಲ. ಯೋಜನೆಗೆಂದು ಮಂಜೂರಾದ 2.50 ಕೋಟಿ ರು. ಅಕಾಡೆಮಿ ಖಾತೆಯಲ್ಲೇ ಉಳಿಯುವಂತಾಗಿದೆ.
ಎರಡು ಸಾವಿರ ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗಳಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೇ.15ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಮುನಿರತ್ನ ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್ನಲ್ಲಿ ನಡೆದ ಭಾರೀ ಹಿಂಸಾಚಾರದ ಪರಿಣಾಮ ನೂರಾರು ಸಂತ್ರಸ್ತ ಹಿಂದೂ ಕುಟುಂಬಗಳು ಪ್ರಾಣಭೀತಿಯಿಂದಾಗಿ ನೆರೆಯ ಮಾಲ್ಡಾ ಜಿಲ್ಲೆಗೆ ಪಲಾಯನ ಮಾಡಿವೆ. ಜನರ ಪಲಾಯನದ ಬಗ್ಗೆ ಸ್ವತಃ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವ ವಿವಾದಾತ್ಮಕ ಜಾತಿ ಜನಗಣತಿ ವರದಿ ಸಂಬಂಧಿಸಿ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ನಾಯಕರು ಸೋಮವಾರ ಸಭೆ ನಡೆಸಲಿದ್ದಾರೆ.