ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಕ್ಕೆ ಎದುರಾಗಿರುವ ಕಾನೂನು ಕಗ್ಗಂಟು ಬಗೆಹರಿಯುವವರೆಗೆ ಕಳೆದ ವರ್ಷ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ.
ಮಹಿಳೆ ಗೌರವದ ಬಗ್ಗೆ ಹೇಳುವ ಮನುಸ್ಮೃತಿಯ ಶ್ಲೋಕ ಮತ್ತು ದೇಶದ ಸ್ವಾತಂತ್ರ್ಯ ಕುರಿತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಹೇಳಿಕೆ ಉಲ್ಲೇಖಿಸಿದ ಹೈಕೋರ್ಟ್, ‘ಯುವತಿ ಮೇಲೆ ಅತ್ಯಾಚಾರ ನಡೆಸಲು ಆರೋಪಿಯೊಬ್ಬನಿಗೆ ಸಹಕಾರ ನೀಡಿದ ಆರೋಪದಲ್ಲಿ ಒಳಗಾಗಿರುವ ವ್ಯಕ್ತಿಗೆ ಜಾಮೀನು ನೀಡಲು ನಿರಾಕರಿಸಿದೆ.
ರಾಜ್ಯ ಸರ್ಕಾರದ ಎಲ್ಲ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಬ್ಯಾಕ್ಟೀರಿಯಾದಿಂದಾಗಿ ವಿಶ್ವಾದ್ಯಂತ ಹಲವು ಹೊಸಹೊಸ ರೋಗಗಳು ಉದ್ಭವಿಸುತ್ತಿರುವ ಹೊತ್ತಿನಲ್ಲಿ, ಸ್ಟಾನ್ಫರ್ಡ್ ವಿವಿಯ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆ (ಎಐ) ಬಳಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಲ್ಲ ವೈರಸ್ಗಳನ್ನು ಸೃಷ್ಟಿಸಿದ್ದಾರೆ.
ರಿಸರ್ವ್ ಬ್ಯಾಂಕ್ನ ನಿಯಮಾವಳಿಯ ಪ್ರಕಾರ ಫಿಕ್ಸ್ಡ್ ಡೆಪಾಸಿಟ್ನಲ್ಲಿ ಇಡಬಹುದಾದ ಕನಿಷ್ಠ ಮೊತ್ತ 1000 ರು.ನಿಂದ 10,000 ರು.ತನಕ ಇದೆ. ಆದರೆ ಗರಿಷ್ಠ ಮಿತಿ ಇಲ್ಲ. ಉಳಿದ ಹೂಡಿಕೆಗಳಿಗೆ ಹೋಲಿಸಿದರೆ ಎಫ್ಡಿಯಲ್ಲಿ ಹಣ ಇಡುವುದು ಸುರಕ್ಷಿತವೇನೋ ಹೌದು. ಆದರೆ ರಿಸ್ಕ್ ಇಲ್ಲದಿಲ್ಲ
ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದೆವು. ಇದು ಎಲ್ಲಕ್ಕಿಂತ ಮುಖ್ಯ. ಕೊನೆಯಲ್ಲಿ ನಮಗೆ ಟ್ರೋಫಿ ಸಿಗಲಿಲ್ಲ, ಟ್ರೋಫಿ ಕೊಡಲಿಲ್ಲ. ಇದನ್ನೆಲ್ಲಾ ಪಕ್ಕಕ್ಕಿಡೋಣ. ನಮ್ಮ ಗೆಲುವಿನಿಂದ ಇಡೀ ದೇಶ ಸಂಭ್ರಮಿಸುತ್ತಿದೆ. ನಾವು ಏಷ್ಯಾ ಚಾಂಪಿಯನ್ ಆಗಿದ್ದು ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.
2008ರ ಮುಂಬೈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂದು ನನಗೆ ಬಲವಾಗಿ ಅನ್ನಿಸಿತ್ತು. ಈ ಬಗ್ಗೆ ಪ್ರಧಾನಿ ಹಾಗೂ ಸಂಬಂಧಿಸಿದವರ ಬಳಿ ಚರ್ಚಿಸಿದ್ದೆ. ಆದರೆ ಸರ್ಕಾರದ ಹಿರಿಯರು ಒಪ್ಪಿರಲಿಲ್ಲ’ ಎಂದು ಪಿ.ಚಿದಂಬರಂ ಸ್ಫೋಟಕ ಹೇಳಿಕೆ ನೀಡಿaದ್ದಾರೆ.
ಕಳೆದ 9 ತಿಂಗಳಿನಿಂದ ಸತತ ಏರಿಕೆ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಸೋಮವಾರ ಮತ್ತೊಂದು ದಾಖಲೆ ಮುಟ್ಟಿದೆ. ಬೆಂಗಳೂರಿನಲ್ಲಿ 1 ಕೆಜಿ ಚಿನ್ನದ ಬೆಲೆ 1.53 ಲಕ್ಷ ರು.ಗೆ ತಲುಪಿದ್ದರೆ, ದೆಹಲಿಯಲ್ಲಿ 1.50 ಲಕ್ಷ ಮುಟ್ಟಿದೆ. ಚಿನ್ನದ ಬೆಲೆ 1.50 ಲಕ್ಷ ರು.ದ ಗಡಿ ದಾಟಿದ್ದು ಇದೇ ಮೊದಲು.
ಪ್ರತಿ ಬಾರಿ ಮಳೆಯಿಂದಾಗುವ ಅತಿವೃಷ್ಟಿ, ಮಳೆ ಕೊರತೆಯಿಂದ ಎದುರಾಗುವ ಅನಾವೃಷ್ಟಿ, ಭೀಮಾ ನದಿ ತೀರದ ಲಕ್ಷಾಂತರ ರೈತರು, ಜನತೆ ಕಣ್ಣೀರ ಕೋಡಿ ಹರಿಸುವಂತಾಗಿದೆ. ತಾವು ಲಕ್ಷಾಂತರ ಹಣ ಹೂಡಿ ಮಾಡುತ್ತಿರೋ ಬೇಸಾಯದ ಫಸಲು ಫಲ ಅತೀ ನೀರಿನಿಂದ, ನೀರಿನ ಕೊರತೆಯಿಂದಾಗಿ ಹಾಳಾಗೋದನ್ನು ಕಣ್ಣಾರೆ ಕಂಡು ಮರಗುತ್ತಾರೆ.
ನನ್ನ ಅಮ್ಮನಿಗೊಂದು ಕನಸಿತ್ತು. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬೇಕು ಎಂಬುದು. ನಾನು ಮತ್ತು ಅಮ್ಮ ಉಡುಪಿಗೆ ಹೋದಾಗ ತನ್ನ ಕುಟುಂಬದಂತೆ ನೋಡಿಕೊಂಡು ನನ್ನ ಅಮ್ಮನ ಕನಸು ಮಾಡಿದ್ದಾರೆ ರಿಷಬ್ ಶೆಟ್ಟಿ.’