ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಬುರುಡೆ ಟೀಂ ತಾನು ಸುಪ್ರೀಂಕೋರ್ಟ್ನಲ್ಲಿ ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನು ಏಮಾರಿಸಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಡಿ ಮನೆಗಳನ್ನು ಗುರುತಿಸಿ ಪಟ್ಟಿ (ಯುಎಚ್ಐಡಿ) ಮಾಡುವ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೆಸ್ಕಾಂ ಮೀಟರ್ ರೀಡರ್ಗಳು ಹಾಗೂ ಬೆಸ್ಕಾಂ ಎಡವಟ್ಟಿನಿಂದ ವಿದ್ಯುತ್ ಬಿಲ್ ಶಾಕ್ಗೆ ತುತ್ತಾಗಿದ್ದ ‘ಗೃಹಜ್ಯೋತಿ’ ಫಲಾನುಭವಿಗಳು ಇದೀಗ ನಿರಾಳರಾಗಿದ್ದಾರೆ.
ಪಾಕಿಸ್ತಾನದ ಎಲ್ಲ ಹಾಗೂ ಚೀನಾದ ಬಹುಭಾಗ ತಲುಪುವ, 2000 ಕಿ.ಮೀ. ದೂರದವರೆಗೆ ನುಗ್ಗಿ ದಾಳಿ ನಡೆಸಬಲ್ಲ, ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ‘ಅಗ್ನಿ ಪ್ರೈಮ್’ ಕ್ಷಿಪಣಿಯನ್ನು ರೈಲು ಆಧರಿತ ಮೊಬೈಲ್ ರಾಕೆಟ್ ಉಡ್ಡಯನ ವ್ಯವಸ್ಥೆ ಮೂಲಕ ಹಾರಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಕಪಿಲೇಶ್ವರ ದೇವಸ್ಥಾನದವರು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ನೊಂದು ಅರ್ಚಕರೊಬ್ಬರ ಮಗ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ನಗರದ ಕಪಿಲೇಶ್ವರ ರಸ್ತೆಯಲ್ಲಿ ನಡೆದಿದೆ.
ಕರ್ತವ್ಯದ ವೇಳೆ ಮೃತಪಟ್ಟ 100 ಮಂದಿ ಸರ್ಕಾರಿ ನೌಕರರ ಅವಲಂಬಿತರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲಿನ ನೇಮಕಾತಿ ಆದೇಶ ಪತ್ರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿತರಿಸಿದರು.
ಆವರಣ ಕಾದಂಬರಿ ಬರೆಯುವ ಮೊದಲು ಎಸ್.ಎಲ್. ಭೈರಪ್ಪ ಅವರು ಬಾನು ಮುಷ್ತಾಕ್ ಅವರ ಮನೆಯಲ್ಲಿ ಒಂದು ವಾರ ಉಳಿದಿದ್ದರು. ಆ ಘಟನೆಯನ್ನು ಬಾನು ನೆನಪಿಸಿಕೊಂಡಿದ್ದಾರೆ. ಆ ನೆನಪುಗಳ ಆಯ್ದಭಾಗ ಇಲ್ಲಿದೆ.
ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿ ಅವರ ನಿವಾಸ. ಎದುರಿಗೆ ವಿಚಾರವಾದಿ ಪ್ರೊ.ಕೆ.ಎಸ್. ಭಗವಾನ್ ಅವರ ಮನೆ. ಎಷ್ಟೋ ಮಂದಿ ಇದನ್ನು ಕೇಳಿದಾಗ, ಬಲ ಹಾಗೂ ಎಡಪಂಥೀಯರು ಎದುರು- ಬದುರು ಇದ್ದಾರೆ! ಎಂದೇ ತಮಾಷೆಯಾಗಿ ಮಾತನಾಡುತ್ತಿದ್ದರು.
ಕಳೆದ ಒಂದು ಒಂದೂವರೆ ವರ್ಷಗಳಿಂದ ಅವರ ಹಠ, ಮಾನಸಿಕ ತುಮುಲಗಳನ್ನೆಲ್ಲ ಹತ್ತಿರದಿಂದ ನೋಡಿದ್ದೀನಿ. ಯಾಕೆ ಇಷ್ಟು ಹಠ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿರಲಿಲ್ಲ - ಸಹನಾ ವಿಜಯಕುಮಾರ್
ನಾನು ಓದಿದ ಭೈರಪ್ಪನವರ ಮೊದಲ ಕಾದಂಬರಿ ‘ನಾಯಿ ನೆರಳು’. ಅಮ್ಮ ಅದನ್ನೋದಿ ನನಗೆ ಓದಲು ಕೊಟ್ಟಿದ್ದರು. ವಿಚಿತ್ರ ಪುನರ್ಜನ್ಮದ ಕಥೆಯಾದರೂ ಬಹಳ ಆಕರ್ಷಕವಾಗಿತ್ತು. ಆ ಬಳಿಕ ‘ಗೃಹಭಂಗ’ ಕಾದಂಬರಿ ಓದಿದೆ.
ನನಗೆ ಭೈರಪ್ಪ ಅವರ ಪರಿಚಯ ಬಹಳ ಚಿಕ್ಕಂದಿನಲ್ಲೇ ಆಗಿತ್ತು. ನಾನು ಆಗ ಅನಿವಾರ್ಯವಾಗಿ ಮುಂಬೈಗೆ ಹೋಗಿ ನೆಲೆಸಬೇಕಾಯಿತು. ಅಲ್ಲಿ ರಂಗಭೂಮಿ ಸಹವಾಸಕ್ಕೆ ಬಿದ್ದೆ