ಐಟಿ, ಇಡಿ ಬಳಸಿ ಕೇಂದ್ರ ಸರ್ಕಾರ ಟಾರ್ಗೆಟ್ : ರಹೀಂ ಖಾನ್

| N/A | Published : Jun 12 2025, 06:05 AM IST / Updated: Jun 12 2025, 10:20 AM IST

ಐಟಿ, ಇಡಿ ಬಳಸಿ ಕೇಂದ್ರ ಸರ್ಕಾರ ಟಾರ್ಗೆಟ್ : ರಹೀಂ ಖಾನ್
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಬಿಜೆಪಿ ಸರ್ಕಾರ ಐಟಿ ಇಡಿ ಮುಂತಾದವುಗಳ ಹೇಗೆ ಬಳಸಿಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದೊಂದು ರೀತಿಯಲ್ಲಿ ಟಾರ್ಗೆಟ್‌ ಆಗಿದೆ ಎಂದು ಸಚಿವ ರಹೀಂ ಖಾನ್‌ ಹೇಳಿದರು.

 ಕುಶಾಲನಗರ : ಕೇಂದ್ರ ಬಿಜೆಪಿ ಸರ್ಕಾ ರ ಐಟಿ, ಇಡಿ ಮುಂತಾದವುಗಳ ಹೇಗೆ ಬಳಸಿಕೊಳ್ಳುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದೊಂದು ರೀತಿಯಲ್ಲಿ ಟಾರ್ಗೆಟ್ ಆಗಿದೆ ಎಂದು ಪೌರಾಡಳಿತ ಮತ್ತು ವಕ್ಫ್ ಖಾತೆ ಸಚಿವ ರಹೀಂ ಖಾನ್ ಹೇಳಿದ್ದಾರೆ.

ಸಂಸದ ತುಕರಾಂ, ಶಾಸಕ ಗಣೇಶ್ ಮುಂತಾದವರ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.

ಎಲ್ಲಾ ಸತ್ಯ ಮುಂದೆ ಗೊತ್ತಾಗಲಿದೆ. ಹಿಂದೆ ಕೆಪಿಸಿಸಿ ಅಧ್ಯಕ್ಷರ ಮೇಲೂ ದಾಳಿ ಮಾಡಿಸಿದ್ದರು. ಅದೇ ರೀತಿ ಅವರದೊಂದು ಟಾರ್ಗೆಟ್ ಇದೆ. ಯಾರಿಗೆಲ್ಲಾ ತೊಂದರೆ ಕೊಡಬೇಕು ಎನ್ನುವುದು ಅವರ ಟಾರ್ಗೆಟ್ ಆಗಿದೆ.

ವಾಲ್ಮೀಕಿ ಹಗರಣದ 20 ಕೋಟಿ ರು. ಹಣ ಎಂಪಿ ಚುನಾವಣೆಗೆ ಬಳಕೆ ಆಗಿರುವ ಬಗ್ಗೆ ಇಡಿಗೆ ಮಾಹಿತಿ ಇದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಆ ರೀತಿ ಯಾವುದೂ ಇಲ್ಲ. ಈಗಾಗಲೇ ಶೇ. 90ರಷ್ಟು ಹಣ ರಿಕವರಿ ಆಗಿದೆ. ಇನ್ನುಳಿದ ಹಣವೂ ರಿಕವರಿ ಆಗುತ್ತದೆ ಎಂದರು.

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಆ ಘಟನೆ ವಿಧಾನಸೌಧದ ಬಳಿ ಆಗಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿರುವ ಘಟನೆ ಇದು. ಈ ರೀತಿ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಆಗಿತ್ತು. ಹಾಗೆಯೇ ಕುಂಭ ಮೇಳದಲ್ಲೂ ಆಗಿತ್ತು. ಘಟನೆ ಆದ ತಕ್ಷಣ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದರು.

Read more Articles on