ಜನರ ಆಸ್ತಿ ವಕ್ಫ್ದೆಂದು ಬಿಂಬಿಸಿ ಹಗಲು ದರೋಡೆ: ಎಎಚ್ಎಸ್ ಕಿಡಿತಲೆತಲಮಾರುಗಳಿಂದ ಇರುವ ಜಮೀನು, ನಿವೇಶನ, ಮನೆಗಳನ್ನು ಹಗಲು ದರೋಡೆ ಮಾಡುವಂತೆ ಇಡೀ ದೇಶದಲ್ಲೇ ವ್ಯವಸ್ಥಿತವಾಗಿ ವಕ್ಫ್ ಆಸ್ತಿ ಎಂಬುದಾಗಿ ದಾಖಲಿಸಿ, ಜನರಲ್ಲಿ ಆತಂಕಕ್ಕೆ ನೂಕಲಾಗುತ್ತಿದೆ. ರಾಜ್ಯ ಸರ್ಕಾರ, ವಕ್ಫ್ ಮಂಡಳಿ, ಕಂದಾಯ ಇಲಾಖೆಗಳ ಇಂತಹ ಕ್ರಮ ಖಂಡನೀಯ ಎಂದು ಬಿಜೆಪಿ ಹಿರಿಯ ನಾಯಕ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಹೇಳಿದ್ದಾರೆ.