ಗಣೇಶನ ಮುಖ-ಕೈಗೆ ಕಪ್ಪುಬಟ್ಟೆ, ಭಕ್ತರ ತೋಳಿಗೆ ಕಪ್ಪುಪಟ್ಟಿ!ಗೌರಿ-ಗಣಪತಿ ಹಬ್ಬದ ಆರಂಭದಿಂದಲೂ ಹಲವಾರು ವಿಘ್ನಗಳನ್ನು ತಂದೊಡ್ಡಿದ್ದಲ್ಲದೇ, ರಾಜ್ಯ ಸರ್ಕಾರದ ಅಲ್ಪಸಂಖ್ಯಾತರನ್ನು ಓಲೈಸುವ ಭರದಲ್ಲಿ ಹಿಂದೂಗಳ ಹಬ್ಬ, ಆಚರಣೆಗಳಿಗೆ ನಿರ್ಬಂಧ ಹೇರುತ್ತಿರುವುದನ್ನು ಖಂಡಿಸಿ ನಗರದಲ್ಲಿ ಭಾನುವಾರ ತಡರಾತ್ರಿ ಶ್ರೀ ವಿಘ್ನೇಶ್ವರನ ಮುಖ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟಿಸಿದ್ದ ಬೆನ್ನಲ್ಲೇ ಮತ್ತೊಂದು ಕಡೆ ಸೋಮವಾರ ತೋಳಿಗೆ ಕಪ್ಪು ಪಟ್ಟೆ, ಕಪ್ಪು ಅಂಗಿ ಧರಿಸಿ, ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರರ ಸಮೇತ ಮೌನ ಮೆರವಣಿಗೆ ನಡೆಸಲಾಯಿತು.