ಸಾರಾಂಶ
ಕನ್ನಡಪರಭ ವಾರ್ತೆ ಪಿರಿಯಾಪಟ್ಟಣಸ್ವಾವಲಂಬಿ ಬದುಕು ರೂಪಿಸುವ ಸಮಾಜ ಕಾರ್ಯಕರ್ತರ ಸೇವಾ ಕಾರ್ಯ ದೇವರು ಮೆಚ್ಚುವಂತದ್ದು ಎಂದು ಒಕ್ಕಲಿಗ ಯುವ ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಹೇಳಿದರು.ತಾಲೂಕಿನ ಹಂದಿಗೂಡು ಕಾವಲಿನಲ್ಲಿ ಬೆಂಗಳೂರು ವಿವಿಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬುಡಕಟ್ಟು ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸದೃಢ ಸಮಾಜ ನಿರ್ಮಿಸುವಲ್ಲಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸ್ವಾವಲಂಬಿ ಬದುಕು ರೂಪಿಸುವ ಸಮಾಜ ಕಾರ್ಯಕರ್ತರ ಸೇವಾ ಕಾರ್ಯ ದೇವರು ಮೆಚ್ಚುವಂತದ್ದು. ಈ ವೇಳೆ ಬುಡಕಟ್ಟು ಜನಾಂಗದ ಸಾಮಾಜಿಕ ಶೈಕ್ಷಣಿಕ ವರದಿ ಸಿದ್ದಪಡಿಸುವುದರ ಜೊತೆಗೆ ಅರಣ್ಯ ಕಾಯ್ದೆ ಭೂಮಾಲಿಕಃತ್ವದ ಹಕ್ಕು, ಸರ್ಕಾರದಿಂದ ಸಿಗುವ ಸೌಲಭ್ಯ, ವಿಶೇಷ ಅನುದಾನಗಳು ಮಾಹಿತಿ ನೀಡುವ ಜೊತೆಗೆ ಕುಟುಂಬ ಕಲಹಗಳು, ಮದ್ಯವ್ಯಸನ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಜನ ಜಾಗೃತಿ ಮೂಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಬಿರದ ಆಯೋಜಕಿ ಡಾ. ವೇದಾ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಬಿರದ ಉದ್ದೇಶಗಳನ್ನು ವಿವರಿಸಿದರು. ಪಿಡಿಒ ಬೋರೇಗೌಡ ಮಾತನಾಡಿ, ಸರ್ಕಾರದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ಈ ವೇಳೆ ಒಕ್ಕಲಿಗ ಯುವ ಬ್ರಿಗೇಡಿನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಅವರನ್ನು ಸನ್ಮಾನಿಸಲಾಯಿತು.ಗ್ರಾಪಂ ಸದಸ್ಯೆ ಮಂಜುಳಾ, ಗ್ರಾಮದ ಮುಖಂಡ ಮುತ್ತಪ್ಪ ರಮೇಶ್, ಶಿಬಿರದ ಆಯೋಜಕ ಡಾ. ರಾಜಶೇಖರ್ , ಡಾ. ಅನಿತಾ ಇದ್ದರು.