ಭೀಮನಹಳ್ಳಿಯಲ್ಲಿ ಮತ್ಸ್ಯ ಸಂಜೀವಿನಿ ಯೋಜನೆ ಅನುಷ್ಠಾನ

| Published : Nov 17 2025, 12:30 AM IST

ಭೀಮನಹಳ್ಳಿಯಲ್ಲಿ ಮತ್ಸ್ಯ ಸಂಜೀವಿನಿ ಯೋಜನೆ ಅನುಷ್ಠಾನ
Share this Article
  • FB
  • TW
  • Linkdin
  • Email

ಸಾರಾಂಶ

ಕಟ್ಟೆಬೆಳಗುಲಿ ಗ್ರಾಮ ಪಂಚಾಯಿತಿಯ ಭೀಮನಹಳ್ಳಿ ಗ್ರಾಮದಲ್ಲಿ “ಮತ್ಸ್ಯ ಸಂಜೀವಿನಿ” ಯೋಜನೆಯನ್ನು ಕರ್ನಾಟಕದ ರಾಷ್ಟಿಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಶ್ರೀ ಬಸವೇಶ್ವರ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೀನು ಸಾಕಾಣಿಕೆಗಾಗಿ ಒಟ್ಟು ೨೦,೦೦೦ ಸಾವಿರ ಮೀನುಗಳನ್ನು ಸಾಕಾಣಿಕೆಗಾಗಿ ಹಾಗೂ ತಮ್ಮ ಸ್ವಯಂ ಉದ್ಯೋಗಕ್ಕಾಗಿ ಸರ್ಕಾರಿ ನೆರೆವಿನಿಂದ ಗೌರಿ ತಳಿ ಮೀನುಗಳು ತಳಿ ಮೀನು ಮರಿ ಬಿತ್ತನೆ ಮಾಡಿ, ಭೀಮನಹಳ್ಳಿ ಗ್ರಾಮದ ಜನರಿಗೆ ಶ್ರೀ ಬಸವೇಶ್ವರಿ ಸ್ವ-ಸಹಾಯ ಸಂಘದ ಮಹಿಳೆಯರು ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಕಟ್ಟೆಬೆಳಗುಲಿ ಗ್ರಾಮ ಪಂಚಾಯಿತಿಯ ಭೀಮನಹಳ್ಳಿ ಗ್ರಾಮದಲ್ಲಿ “ಮತ್ಸ್ಯ ಸಂಜೀವಿನಿ” ಯೋಜನೆಯನ್ನು ಕರ್ನಾಟಕದ ರಾಷ್ಟಿಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಶ್ರೀ ಬಸವೇಶ್ವರ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಅನುಷ್ಠಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ್ ಜಿ ಮಾತನಾಡಿ, ಈ ಯೋಜನೆಯು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ಸಬಲೀಕರಣಕ್ಕಾಗಿ ಮೀನು ಸಾಕಣೆಯಲ್ಲಿ ತೊಡಗಿಸಿಕೊಳ್ಳಲು ಬೆಂಬಲ ನೀಡುತ್ತದೆ. ಈ ಯೋಜನೆಯು ಉಚಿತ ಮೀನು ಸಾಕಣೆ ತರಬೇತಿ, ಮೀನು ಮರಿಗಳು, ಮತ್ತು ಮಾರಾಟ ವಾಹನಗಳ ಖರೀದಿಗೆ ಸಹಾಯಧನ ನೀಡುತ್ತದೆ. ಜೊತೆಗೆ ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದರು.ಹೊಳೆನರಸೀಪುರ ತಾಲೂಕಿನ ಮಹಿಳಾ ಸಬಲೀಕರಣಕ್ಕಾಗಿ ಕಟ್ಟೆಬೆಳಗುಲಿ ಗ್ರಾಪಂ ಭೀಮನಹಳ್ಳಿ ಗ್ರಾಮ ಆಯ್ಕೆಮಾಡಿಕೊಂಡು ಗ್ರಾಪಂ ವ್ಯಾಪ್ತಿಯ ೧೦ ಎಕರೆ ವಿಸ್ತೀರ್ಣದ ಕೆರೆಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ತಮ್ಮ ಗ್ರಾಮದಲ್ಲಿ ಮೀನು ಸಾಕಾಣಿಕೆಗಾಗಿ ಒಟ್ಟು ೨೦,೦೦೦ ಸಾವಿರ ಮೀನುಗಳನ್ನು ಸಾಕಾಣಿಕೆಗಾಗಿ ಹಾಗೂ ತಮ್ಮ ಸ್ವಯಂ ಉದ್ಯೋಗಕ್ಕಾಗಿ ಸರ್ಕಾರಿ ನೆರೆವಿನಿಂದ ಗೌರಿ ತಳಿ ಮೀನುಗಳು ತಳಿ ಮೀನು ಮರಿ ಬಿತ್ತನೆ ಮಾಡಿ, ಭೀಮನಹಳ್ಳಿ ಗ್ರಾಮದ ಜನರಿಗೆ ಶ್ರೀ ಬಸವೇಶ್ವರಿ ಸ್ವ-ಸಹಾಯ ಸಂಘದ ಮಹಿಳೆಯರು ಮಾದರಿಯಾಗಿದ್ದಾರೆ. ಕೆರೆಗಳನ್ನು ಮಹಿಳಾ ಸ್ವ-ಸಹಾಯ ಸಂಘಗಳಿಗೆ ಮೀಸಲಿಡಲಾಗುತ್ತಿದೆ. ಮೀನುಗಾರಿಕೆ ಇಲಾಖೆಯಿಂದ ಶೇ.೫೦ರಷ್ಟು ಸಬ್ಸಿಡಿ ದರದಲ್ಲಿ ಮೀನು ಮರಿಗಳನ್ನು ಪೂರೈಸಲಾಗುತ್ತದೆ. ಉಚಿತ ತರಬೇತಿ ನೀಡಲಾಗುತ್ತಿದ್ದು, ಮಹಿಳೆಯರು ಮೀನು ಸಾಕಣೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಳ್ಳುವುದರಿಂದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದು ಸಹಕಾರಿಯಾಗಿದೆ ಎಂದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತ್ರಾವತಿ ಎಸ್ ಮಾತನಾಡಿ, ಮೀನು ಮರಿಗಳ ಸಾಕಾಣಿಕೆ ಯಶಸ್ವಿಯಾಗಿ ಮಾರುಕಟ್ಟೆ ತಲುಪಿಸಿ ಇದು ಒಂದು ಉದ್ಯಮವಾಗಿ ಬೆಳೆದು ಸಬ್ಸಿಡಿ ರೂಪದಲ್ಲಿ ಬಂದು ವಾಹನ ಪಡೆಯುವ ಹಂತದವರೆಗೂ ತಲುಪಬೇಕೆಂದು ಮಾಹಿತಿ ತಿಳಿಸಿಕೊಟ್ಟರು.

ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸುಮ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ತಾಲೂಕಿನ ಹೊಳೆನರಸೀಪುರ, ಭೀಮನಹಳ್ಳಿ ಗ್ರಾಮದ ಸ್ವ-ಸಹಾಯ ಸಂಘಗಳ ಆಯ್ಕೆ ಮಾಡಿಕೊಂಡು, ಈ ಗ್ರಾಮದ ಕೆರೆಗಳ ಸಾಮರ್ಥ್ಯಕ್ಕೆ ಅನುಸಾರವಾಗಿ ಗೌರಿ ತಳಿ ಮೀನು ಮರಿಗಳನ್ನು ವಿತರಣೆ ಮಾಡಲಾಗಿದೆ. ಭೀಮನಹಳ್ಳಿ ಕೆರೆಗೆ ೨೦,೦೦೦ ಮೀನು ಮರಿಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.ಹಾಸನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಜಿಲ್ಲಾ ವ್ಯವಸ್ಥಾಪಕರಾದ ಕಿಶೋರ್‌ ಮಾತನಾಡಿ, ಯೋಜನೆಯ ಮುಖ್ಯ ಉದ್ದೇಶಗಳು ಮಹಿಳಾ ಸಬಲೀಕರಣ ಸ್ವಸಹಾಯ ಸಂಘದ ಮಹಿಳೆಯರ ಆದಾಯವನ್ನು ಹೆಚ್ಚಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಾಯ ಮಾಡುವುದು ಎಂದು ತಿಳಿಸಿದರು.ಈ ವೇಳೆ ಗ್ರಾಪಂ ಅಧ್ಯಕ್ಷೆ ಪೂರ್ಣಿಮ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕರುಗಳಾದ (ಎನ್.ಆರ್.ಎಲ್.ಎಂ) ನವೀನ್ ಬಿ.ಪಿ, ತಾಲೂಕು ಕೃಷಿ ವ್ಯವಸ್ಥಾಪಕಿ ನಿಸರ್ಗ ಎಚ್.ಎಂ. ಕೃಷಿಯೇತರ ವ್ಯವಸ್ಥಾಪಕಿ ರೋಹಿಣಿ ಐ.ಡಿ, ವಲಯ ಮೇಲ್ವಿಚಾರಕಿ ಲಲಿತಾಶ್ರೀ, ವಲಯ ಮೇಲ್ವಿಚಾರಕರು, ಯುವ ವೃತ್ತಿಪರರು, ಗ್ರಾಪಂ ಸಿಬ್ಬಂದಿ ಸಂಜೀವಿನಿ ಒಕ್ಕೂಟದ ಸಿಬ್ಬಂದಿ, ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.