ಮರಳು ದೋಚುವವರ ವಿರುದ್ಧ ನಿರಂತರ ಯುದ್ಧಜಿಲ್ಲೆಯಲ್ಲಿ ಕಗಿಣಾ, ಕಮಲಾವತಿ, ಭೀಮಾ ಸೇರಿದಂತೆ ನದಿ ತೀರದಲ್ಲಿನ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನಿರಂತರ ಕ್ರಮ ಕೈಗೊಳ್ಳುತ್ತಿದೆ. ಮರಳು ಸಾಗಾಣಿಕೆಯಲ್ಲಿ ಸರ್ಕಾರಕ್ಕೆ ರಾಯಧನ ವಂಚನೆ, ಮರಳು ಕಳವು ಪ್ರಕರಣಗಳನ್ನು ಹಾಕುವ ಮೂಲಕ ಕಳ್ಳರನ್ನು ಬಗ್ಗುಬಡಿಯುತ್ತಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.