30 ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಸಂಭ್ರಮಾಚರಣೆಮಾ. 30 ರಂದು ಬೆಳಗ್ಗೆ 9ಕ್ಕೆ ಶಂಕರಮಠದ ಆವರಣದಲ್ಲಿ ಸಹಸ್ರ ಮೋದಕ ಗಣಪತಿ ಹೋಮ ನಡೆಯಲಿದ್ದು, ಸಂಜೆ 6ಕ್ಕೆ ಮೈಸೂರು ಮಹಾನಗರಕ್ಕೆ ಆಗಮಿಸಲಿರುವ ಸ್ವಾಮೀಜಿಯವರು ಸಂಜೆ 6ಕ್ಕೆ ಸಚ್ಚಿದಾನಂದ ವಿಲಾಸ ಗುರುಭವನ ಹಾಗೂ ನೂತನ ಸಭಾಂಗಣ ಉದ್ಘಾಟಿಸುವರು. ಮಾ. 31ರಂದು ದೇವಸ್ಥಾನದ ಆವರಣದಲ್ಲಿ ಮಹಾರುದ್ರ ಜಪ ಮತ್ತು ಶತಚಂಡಿ ಪಾರಾಯಣ ಶುಭಾರಂಭ, ಸಾರ್ವಜನಿಕ ದರ್ಶನ, ಪಾದಪೂಜೆ ಮತ್ತು ಭಿಕ್ಷಾವಂದನೆ ಹಾಗೂ ಚಂದ್ರಮೌಳೇಶ್ವರ ಪೂಜೆಯಲ್ಲಿ ಭಾಗವಹಿಸುವರು.