ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಶೋಕ್ ಯಾರು
Jul 04 2025, 11:46 PM ISTಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಚಾರದ ಬಗ್ಗೆ ನವೆಂಬರ್ ನಂತರದಲ್ಲಿ ಪ್ರತಿಕ್ರಿಯೆ ಕೊಡಲಾಗುವುದು. ಅದರ ಬಗ್ಗೆ ಮಾತನಾಡಲು ಆರ್. ಅಶೋಕ್ ಯಾರು ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ತಿರುಗೇಟು ನೀಡಿದರು. ನಮ್ಮ ಹೈಕಮಾಂಡ್ ಇದೆ, ಅವರು ತೀರ್ಮಾನ ಮಾಡುತ್ತಾರೆ, ಸಿಎಂ ಬದಲಾವಣೆ ಬಗ್ಗೆ ಮಾತನಾಡಲು ಅಶೋಕ್ ಯಾರು ಎಂದು ಕುಟುಕಿದರು. ಯಾರೋ ಹೇಳಿದರು ಅಂದಮಾತ್ರಕ್ಕೆ ಸಿಎಂ ಬದಲಾಗುವುದಿಲ್ಲ ಎನ್ನುವ ಮೂಲಕ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದರು. ಅಶೋಕ್ ಅವರು ನವೆಂಬರ್ವರೆಗೆ ಗಡುವು ನೀಡಿದ್ದಾರೆ. ಆಗ ಏನಾಗುತ್ತೆ ನೋಡಿ, ನಂತರ ನಾನು ಮಾತನಾಡುವೆ ಎಂದು ಟಾಂಗ್ ಕೊಟ್ಟರು.