ಮೈಸೂರು ರಸ್ತೆ ಅಗಲೀಕರಣ ಕಾಮಗಾರಿ ವೀಕ್ಷಿಸಿದ ಶಾಸಕ ರೇವಣ್ಣ
Apr 18 2025, 12:33 AM ISTಕೇಂದ್ರ ಸರ್ಕಾರದಿಂದ ೬೦ ಅಡಿ ರಸ್ತೆಗೆ ೨೯ ಕೋಟಿ ಹಣ ಮಂಜೂರಾಗಿದ್ದು, ಯಾರಿಗೂ ತೊಂದರೆ ಆಗದಂತೆ ರಸ್ತೆ ಒಂದು ಬದಿಯ ಡ್ರೈನಿಂದ ೩೦ ಅಡಿ ರಸ್ತೆಯ ಕಾಮಗಾರಿ ಪ್ರಾರಂಭ ಮಾಡಲಾಗಿದೆ ಮತ್ತು ಡಾ. ಅಂಬೇಡ್ಕರ್ ವೃತ್ತದ ತನಕ ಮಾಡುತ್ತೇವೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು. ಸೂರನಹಳ್ಳಿ ರೈಲ್ವೆ ಗೇಟ್ ಸಮೀಪದ ಅಂಡರ್ಪಾಸ್ ಹತ್ತಿರದಿಂದ ಕಾಮಗಾರಿ ಪ್ರಾರಂಭ ಮಾಡಲಾಗಿದ್ದು, ಜೆಸಿಬಿ ಬಳಸಿ, ಚರಂಡಿಗಳನ್ನು ತೆಗೆಯಲಾಗುತ್ತಿದ್ದು, ೬೦ ಅಡಿ ರಸ್ತೆ ಕಾಮಗಾರಿಯಲ್ಲಿ ಅಗತ್ಯವಿದ್ದಲ್ಲಿ ಭೂ ಸ್ವಾಧೀನವಾದ ನಂತರ ಪರಿಹಾರ ನೀಡಿ ಉಳಿಕೆ ಕಾಮಗಾರಿ ಮಾಡುತ್ತೇವೆ ಎಂದರು.