‘ವೈಕೋಮ್‌ ಪೊರಾಟ್ಟಂ’ಕನ್ನಡ ಅನುವಾದ ಕೃತಿ ಬಿಡುಗಡೆ ಮಾಡಿದ ಸ್ಟಾಲಿನ್‌

Nov 30 2023, 01:15 AM IST
ನವದೆಹಲಿ: ಮುಂಬರುವ ಸಂಸತ್‌ ಅಧಿವೇಶನಕ್ಕೆ ಲೋಕಸಭಾ ಸಚಿವಾಲಯ 18 ಮಸೂದೆಗಳನ್ನು ಪಟ್ಟಿ ಮಾಡಿದ್ದು, ಡಿ.4ರಿಂದ ಆರಂಭವಾಗುವ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಮಸೂದೆಗಳ ಪೈಕಿ ಪ್ರಮುಖವಾಗಿ ಮಹಿಳಾ ಮಸೂದೆಯನ್ನು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೆರಿಗೂ ವಿಸ್ತರಿಸುವ ಕುರಿತಾಗಿ 2, ಅಪರಾಧ ಕಾನೂನುಗಳ ಕುರಿತಾಗಿ 3 ಮತ್ತು ಜಮ್ಮು ಕಾಶ್ಮೀರದ ವಿಧಾನಸಭೆಯ ಸಂಖ್ಯಾಬಲವನ್ನು 114ಕ್ಕೆ ಹೆಚ್ಚಳ ಮಾಡಿ ಕಾಶ್ಮೀರಿ ವಲಸಿಗರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡವರು ಹಾಗೂ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಕಲ್ಪಿಸುವ ಕುರಿತಂತೆ 4, ಚುನಾವಣಾ ಆಯುಕ್ತರನ್ನು ನೇಮಿಸಲು ಪ್ರಧಾನಮಂತ್ರಿ ನೇತೃತ್ವದಲ್ಲಿ ಸಮಿತಿ ರಚಿಸುವ ಕುರಿತಂತೆ 1, ಹಾಗೆಯೇ ಅಂಚೆ, ಪತ್ರಿಕೆ, ದೆಹಲಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ವಕೀಲರಿಗೆ ಸಂಬಂಧಿಸಿದ ಮಸೂದೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.

ಜಬ್ಬಲಗುಡ್ಡ ಬಳಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

Nov 27 2023, 01:15 AM IST
ಕೊಪ್ಪಳ ತಾಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಬಳಿ ಪೂರ್ಣಕುಂಭದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆಯು ಭಾನುವಾರ ಕೊಪ್ಪಳ ತಾಲೂಕಿಗೆ ಪ್ರವೇಶಿಸಿತು. ಬೆಳಗ್ಗೆ ಗಂಗಾವತಿಯಿಂದ ಹೊರಟ ರಥಯಾತ್ರೆ ಬೂದಗುಂಪಾ ಮಾರ್ಗವಾಗಿ ಕೊಪ್ಪಳ ತಾಲೂಕಿಗೆ ಪ್ರವೇಶ ಮಾಡಿತು. ತಾಲೂಕಿನ ಮಾರ್ಗ ಮಧ್ಯೆದ ಜಬ್ಬಲಗುಡ್ಡ ಗ್ರಾಮದಲ್ಲಿ ಬಳಿಯಲ್ಲಿ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಜಬ್ಬಲಗುಡ್ಡ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಮಹಿಳೆಯರು ರಥದ ಮುಂದೆ ಕುಂಭ ಹೊತ್ತು ಸಾಗಿದರು. ಕನ್ನಡಪರ ಸಂಘಟನೆಗಳು, ವಿವಿಧ ಸಂಘಟನೆಗಳು, ಮುಖಂಡರು ರಥಯಾತ್ರೆ ಸ್ವಾಗತಿಸಿದರು. ಕನ್ನಡ ಧ್ವಜದ ಶಾಲುಗಳನ್ನು ಹಾಕಿ, ಕನ್ನಡ ಜಯಘೋಷ ಕೂಗುತ್ತಾ ಸಾಲಾಗಿ ಹೆಜ್ಜೆ ಹಾಕಿ ಸಂಭ್ರಮಿಸಿದರು. ರಥಯಾತ್ರೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.