ಧಾರವಾಡ ಜಿಲ್ಲೆ ಸೇರಿ ಇಡೀ ಉತ್ತರ ಕರ್ನಾಟಕದ ಆರ್ಥಿಕತೆ ಹಾಗೂ ಔದ್ಯೋಗಿಕ ಪ್ರಮಾಣ ಹೆಚ್ಚಲು ಒಂದರ್ಥದಲ್ಲಿ ಟಾಟಾ ಕಂಪನಿಯ ಪಾತ್ರ ಬಹುದೊಡ್ಡದು.
ರತನ್ ಟಾಟಾ ಅವರಿಗೆ ನಾಯಿಗಳೆಂದರೆ ಅಚ್ಚುಮೆಚ್ಚು. ಶ್ವಾನಪ್ರಿಯರಾದ ಟಾಟಾ ಅವರು ತಮ್ಮ ಬಳಿ ಇದ್ದ 3-4 ನಾಯಿಗಳೊಂದಿಗೆ ಸುತ್ತಾಡುವುದು, ಪ್ರವಾಸ ಹೋಗುವುದನ್ನು ಮಾಡುತ್ತಿದ್ದರು.
1991ರಲ್ಲಿ ರತನ್ ಟಾಟಾ ಕಂಪನಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾ ಕಂಪನಿ ಅದರ ಆದಾಯ ಕೇವಲ 33000 ಕೋಟಿ ರು. ಆಸುಪಾಸಿನಲ್ಲಿತ್ತು. ಆದರೆ 21 ವರ್ಷಗಳ ಬಳಿಕ ಅವರು ಅಧಿಕಾರದಿಂದ ಕೆಳಗೆ ಇಳಿದ ವೇಳೆ ಕಂಪನಿಯ ಆದಾಯ ಭರ್ಜರಿ 8.50 ಲಕ್ಷ ಕೋಟಿ ರು.ಗೆ ತಲುಪಿತ್ತು.
ದಶಕಗಳ ಹಿಂದೆಯೇ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದ ರತನ್ ಟಾಟಾ, ದೇಶೀಯವಾಗಿ ಉದ್ಯಮಗಳನ್ನು ವಿಸ್ತರಿಸುವ ಜೊತೆಗೆ ಜಾಗತಿಕವಾಗಿಯೂ ಟಾಟಾ ಗ್ರೂಪ್ ಹೆಜ್ಜೆ ಗುರುತು ಹೆಚ್ಚಿಸಲು ಹಲವು ಖ್ಯಾತನಾಮ ಕಂಪನಿಗಳನ್ನು ಖರೀದಿಸಿದ್ದರು.
ಟಾಟಾ ಸಮೂಹ ಸಂಸ್ಥೆ ಭಾರತದ ಅತಿ ದೊಡ್ಡ ಉತ್ಪಾದನಾ ಸಂಸ್ಥೆಯಾಗಿದೆ. ಇದನ್ನು 1868ರಲ್ಲಿ ಭಾರತದ ಕೈಗಾರಿಕಾ ಪಿತಾಮಹಾ ಜೆಮ್ಶೆಡ್ಜಿ ಟಾಟಾ ಸ್ಥಾಪಿಸಿದರು. ಮಹಾರಾಷ್ಟ್ರದ ಮುಂಬೈ ಹಾಗೂ ನವಿಮುಂಬೈಗಳಲ್ಲಿ ಟಾಟಾಗ್ರೂಪ್ನ ಪ್ರಧಾನ ಕಚೇರಿ ಇದೆ.
ದೇಶದ ಅತಿದೊಡ್ಡ ಸಂಸ್ಥೆ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಅವರು ಬೆಂಗಳೂರಿಗಿದ್ದ ಸಿಲಿಕಾನ್ ಸಿಟಿಯ ಹೆಸರನ್ನು ಗಟ್ಟಿಗೊಳಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ.
ಟಾಟಾ ಗ್ರೂಪ್ ಕಂಪನಿಗಳ ಷೇರುಗಳು ಗುರುವಾರ ಏರಿಕೆ ಕಂಡಿವೆ. ಇದರಲ್ಲಿ ಟಾಟಾ ಕೆಮಿಕಲ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಟಾಪ್ ಸಾಧಕ ಕಂಪನಿಗಳಾಗಿ ಹೊರಹೊಮ್ಮಿವೆ ಹಾಗೂ ಶೇ.10ರಷ್ಟು ಏರಿಕೆಯಾಗಿದೆ.
ಬುಧವಾರ ನಿಧನರಾದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥ ಹಾಗೂ ಶ್ರೇಷ್ಠ ಸಮಾಜಸೇವಕ ರತನ್ ಟಾಟಾ ಅವರ ಅಂತ್ಯಕ್ರಿಯೆ ಸಹಸ್ರಾರು ಶೋಕತಪ್ತ ಗಣ್ಯರು ಹಾಗೂ ಅಭಿಮಾನಿಗಳ ನಡುವೆ ಮುಂಬೈನ ವರ್ಲಿಯಲ್ಲಿರುವ ಪಾರ್ಸಿ ಚಿತಾಗಾರದಲ್ಲಿ ನೆರವೇರಿತು
ರತನ್ ಟಾಟಾ ತಮ್ಮ ಕನಸಿನ ಟಾಟಾ ನ್ಯಾನೋ ಕಾರು ಘಟಕವನ್ನು ಆರಂಭಿಸಲು ಮೊದಲಿಗೆ ಪಶ್ಚಿಮ ಬಂಗಾಳದ ಸಿಂಗೂರು ಗ್ರಾಮ ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ಅಂದಿನ ಸಿಪಿಎಂ ಸರ್ಕಾರ ಭೂಮಿ ನೀಡಿತ್ತು. ಅದರಂತೆ ಘಟಕ ನಿರ್ಮಾಣದ ಕಾಮಗಾರಿಯೂ ಆರಂಭವಾಗಿತ್ತು.
ದೇಶದ ಮನೆಮನೆಗಳಲ್ಲೂ ನಿತ್ಯವೂ ಟಾಟಾ ಸಮೂಹದ ಉತ್ಪನ್ನಗಳ ಬಳಕೆ ಮಾಡಲಾಗುತ್ತದೆ. ಗುಣಮಟ್ಟ, ವಿಶ್ವಾಸಾರ್ಹತೆ ಉಳಿಸಿಕೊಂಡ 156 ವರ್ಷ ಇತಿಹಾಸ ಕಂಪನಿ ಹೊಂದಿದೆ.