ಕಾಡಾನೆ ದಾಳಿ, ಅಪಾರ ಪ್ರಮಾಣದ ಬೆಳೆ ನಾಶ
Oct 10 2024, 02:16 AM ISTಕೊಟ್ಟಿಗೆಹಾರ: ಸಮೀಪದ ದೇವನಗೂಲ್ ಗ್ರಾಮದಲ್ಲಿ ಕಾಡಾನೆ ದಾಳಿ ನಡೆಸಿ ಬೈನೇಮರ, ಬಾಳೆ ಗಿಡಗಳನ್ನು ತುಳಿದು ನಾಶ ಮಾಡಿದೆ. ಬುಧವಾರ ಮುಂಜಾನೆ ದೇವನಗೂಲ್ ಗ್ರಾಮದ ಬೆಳ್ಳಾಚಾರ್ ಅವರ ಮನೆ ಬಳಿ ಬಂದು ಕಾಡಾನೆ ಬಾಳೆಗಿಡಗಳನ್ನು ಎಳೆದು ತುಳಿದು ಹಾನಿ ಮಾಡಿದೆ. ತೆಂಗಿನ ಗಿಡ, ಕಾಡು ಮೆಣಸು ಬಳ್ಳಿಯನ್ನು ಎಳೆದು ನಷ್ಟ ಉಂಟು ಮಾಡಿದೆ ಎಂದು ಬೆಳೆಗಾರ ಬೆಳ್ಳಾಚಾರ್ ಅಳಲನ್ನು ತೋಡಿಕೊಂಡಿದ್ದಾರೆ.