• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹಳಿಯಾಳದಲ್ಲಿ ಬಿರುಗಾಳಿ, ಮಳೆ, ಉದುರಿದ ಮಾವಿನಕಾಯಿ

Apr 24 2025, 11:45 PM IST
ಹಳಿಯಾಳ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಬುಧವಾರ ಸಂಜೆ ಬಿರುಗಾಳಿ, ಮಳೆಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಕಟಾವಿಗೆ ಬಂದಂತಹ ಮಾವಿನ ಫಸಲು ಸಂಪೂರ್ಣವಾಗಿ ನೆಲಕ್ಕುದುರಿ ಬಿದ್ದಿದೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ.

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

Apr 24 2025, 02:04 AM IST
ಬೆಳಗ್ಗೆಯಿಂದ ಬಿಸಿಲಿನ ತಾಪ ಜೋರಾಗಿತ್ತು. ಸಂಜೆ 5.30ರ ವೇಳೆಗೆ ಸಣ್ಣದಾಗಿ ಶುರುವಾದ ಮಳೆ, ಕೆಲಹೊತ್ತಿನಲ್ಲೇ ರಭಸತೆ ಪಡೆಯಿತು. ಮಳೆ ಪ್ರಾರಂಭದಲ್ಲಿ ಕೆಲಕಾಲ ಆಲಿಕಲ್ಲುಗಳು ಬಿದ್ದವಾದರೂ ಕೆಲಸಮಯದ ಬಳಿಕ ಆಲಿಕಲ್ಲು ಬೀಳುವುದು ನಿಂತಿತು. ಆಗ ವರುಣನ ಅಬ್ಬರ ಜೋರಾಯಿತು.

ಭಾರೀ ಗಾಳಿ ಮಳೆ: ಬಂಟ್ವಾಳದಲ್ಲಿ ಅಪಾರ ಹಾನಿ

Apr 24 2025, 12:07 AM IST
ಸೋಮವಾರ ರಾತ್ರಿ ಸುರಿದ ಗಾಳಿ ಮಳೆಗೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಹಲವೆಡೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ವಿಪರೀತ ಸೆಕೆ ವಾತಾವರಣವಿತ್ತು. ಸಂಜೆ ವೇಳೆಗೆ ದಿಢೀರನೆ ಮೋಡ ಕವಿದು ಹತ್ತು ನಿಮಿಷಗಳ ಕಾಲ ಮಂಗಳೂರಿನಲ್ಲಿ ಉತ್ತಮ ಮಳೆಯಾಗಿದೆ.

ಮಳೆ ಹಾನಿಗೊಳಗಾದವರಿಗೆ ಶೀಘ್ರ ಪರಿಹಾರ ನೀಡಿ

Apr 23 2025, 12:35 AM IST
ಜಿಲ್ಲೆಯಲ್ಲಿ ಮಳೆ-ಗಾಳಿಯಿಂದ ಹಾನಿಗೊಳಗಾದ ಮನೆಗಳನ್ನು ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಹಾನಿಗೊಳಗಾದ ಮನೆ ಮಾಲೀಕರಿಗೆ ತಕ್ಷಣ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.

ಮಳೆ- ಗಾಳಿಗೆ ನೆಲಕ್ಕೆ ಬಿದ್ದ ಬಾಳೆ

Apr 23 2025, 12:34 AM IST
ಈಚೆಗೆ ಬೀಸಿದ ಮಳೆ-ಗಾಳಿಯ ರಭಸಕ್ಕೆ ವಿವಿಧಡೆ ರೈತರು ಬೆಳೆದಿದ್ದ ಬಾಳೆ ಬೆಳೆ ನೆಲಕ್ಕೆ ಬಿದ್ದಿದ್ದು ರೈತರಲ್ಲಿ ನಷ್ಟದ ಭೀತಿ ಎದುರಾಗಿದೆ.

ಬೆಳಗಾವಿಯಲ್ಲಿ ಗಾಳಿ ಮಳೆ: ಸಿಡಿಲಿಗೆ ಮರ ಛಿದ್ರ, ಮನೆಯ ಗ್ಲಾಸ್‌ ಪುಡಿಪುಡಿ

Apr 23 2025, 12:34 AM IST
ಬೆಳಗಾವಿ ಮತ್ತು ಖಾನಾಪುರದಲ್ಲಿ ಮಂಗಳವಾರ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಬಿರುಗಾಳಿ ಸಮೇತ ಮಳೆ ಆಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಮಳೆ ಸುರಿದಿದೆ. ಗಾಳಿ ಮಳೆಗೆ ಕೆಲವೆಡೆ ತಗಡಿನ ಶೆಡ್‌ಗಳು ಹಾರಿಹೋಗಿವೆ.

ಮುಂಗಾರು ಪೂರ್ವ ಮಳೆ: ಕೃಷಿಯತ್ತ ಚನ್ನಗಿರಿ ತಾಲೂಕು ರೈತರ ಚಿತ್ತ

Apr 23 2025, 12:33 AM IST
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಸಂಜೆ ಗುಡುಗು-ಮಿಂಚು, ಆಲಿಕಲ್ಲಿನ ಸಹಿತವಾಗಿ ಪೂರ್ವ ಮುಂಗಾರು ಮಳೆಯಾಗಿದೆ. ತಾಲೂಕಿನ ಮಳೆ ಮಾಪನ ಕೇಂದ್ರಗಳಾದ ಕತ್ತಲಗೆರೆ, ಬಸವಾಪಟ್ಟಣ, ಸಂತೆಬೆನ್ನೂರು ವ್ಯಾಪ್ತಿಯಲ್ಲಿ ಮಳೆಯಾದ ಹಿನ್ನೆಲೆ ಇಲ್ಲಿಯ ಮಳೆ ಮಾಪನಗಳಲ್ಲಿ ದಾಖಲಾಗಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ವಾಡಿಕೆಗಿಂತ ಶೇ.113ರಷ್ಟು ಹೆಚ್ಚಿನ ಪೂರ್ವ ಮುಂಗಾರು ಮಳೆ

Apr 21 2025, 01:30 AM IST
ರಾಜಧಾನಿಯಲ್ಲಿ ಭಾನುವಾರವೂ ಮಳೆ ಮುಂದುವರೆದಿದ್ದು, ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.113ರಷ್ಟು ಹೆಚ್ಚಿನ ಮಳೆಯಾಗಿದೆ.

ಮಳೆ ನೀರು ಸಂಗ್ರಹಿಸಿದರೆ ನೀರಿನ ಅಭಾವ ಉಂಟಾಗದು

Apr 21 2025, 12:54 AM IST
ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, 117 ಸೆಂ.ಮೀ ಮಳೆಯಾಗುತ್ತದೆ

ರಣ ಬಿಸಿಲಿನಿಂದ ಕಂಗೆಟ್ಟಿದ್ದ ಅರಣ್ಯ ಪ್ರದೇಶಗಳ ವನ್ಯ ಸಂಪತ್ತಿಗೂ ಕಳೆ ತಂದ ಮುಂಗಾರು ಪೂರ್ವ ಮಳೆ

Apr 20 2025, 02:01 AM IST
ರಣ ಬಿಸಿಲಿನಿಂದ ಕಂಗೆಟ್ಟಿದ್ದ ತಾಲೂಕಿನ ಅರಣ್ಯ ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ವನ್ಯಜೀವಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
  • < previous
  • 1
  • ...
  • 15
  • 16
  • 17
  • 18
  • 19
  • 20
  • 21
  • 22
  • 23
  • ...
  • 119
  • next >

More Trending News

Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್‌ ಜಾಮೀನು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved