ಬಿರುಕು ಬಿಟ್ಟ ಹೊಳೆಹೊನ್ನೂರು ಬೈಪಾಸ್ ರಸ್ತೆ

Jun 19 2025, 12:35 AM IST
ಪಟ್ಟಣದ ಬೈಪಾಸ್ ರಸ್ತೆ ಹಾಗೂ ಭದ್ರಾನದಿ ನೂತನ ಸೇತುವೆ ಹೊಳೆಹೊನ್ನೂರು ಭಾಗದ ಜನರ ಹಲವು ವರ್ಷಗಳ ಕನಸು. ಈ ಕನಸು ನನಸಾಗಿ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರ ಆರಂಭ ಆದ ನಾಲ್ಕೇ ದಿನದಲ್ಲಿ ಅಪಘಾತ ಸಂಭವಿಸಿ ಇಬ್ಬರು ಪ್ರಾಣ ಕಳೆದುಕೊಂಡರು. ಇದರಿಂದ ಕೋಪಗೊಂಡ ಸುತ್ತಮುತ್ತಲ ಗ್ರಾಮಸ್ಥರು ಪ್ರಬಲವಾಗಿ ಪ್ರತಿಭಟಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಜೆಸಿಪಿಯಿಂದ ಆಳವಾದ ಕಾಲುವೆ ತೆಗಿಸಿ ಸಂಚಾರವನ್ನು ತಡೆದರು. ನಂತರ ಸಂಸದರು ಅಂಡರ್ ಪಾಸ್ ನಿರ್ಮಿಸಿಕೊಡುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಇದೆಲ್ಲಾ ಕೊನೆಯಾಗಿ ಕಳೆದ ತಿಂಗಳು ಬೈಪಾಸ್ ರಸ್ತೆಯನ್ನು ಉದ್ಘಾಟನೆ ಮಾಡಲಾಯಿತು. ಹೊಳಹೊನ್ನೂರು ಭಾಗದ ಜನರ ಕನಸಿಗೆ ರೆಕ್ಕೆಪುಕ್ಕ ಬಂದು ಹಾರಾಡುವಷ್ಟರಲ್ಲಿ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.