ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಹ್ವಾನ ಬಂದಿಲ್ಲ
Oct 30 2024, 12:32 AM ISTನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ವಿಚಾರದಲ್ಲಿ ಇನ್ನು ಯಾವ ತೀರ್ಮಾನ ಮಾಡಿಲ್ಲ. ನನಗೆ ಕೂಡ ಯಾವ ಆಹ್ವಾನ ಬಂದಿರುವುದಿಲ್ಲ ಎಂದು ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ತಿಳಿಸಿದರು. ಕುಟುಂಬ ಸಮೇತರಾಗಿ ಮಂಗಳವಾರ ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಜಿಲ್ಲಾಡಳಿತದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಜೀವನದಲ್ಲಿ ಎರಡನೇ ಬಾರಿ ಹಾಸನಾಂಬೆ ತಾಯಿ ದರ್ಶನವನ್ನು ಮಾಡುತ್ತಿದ್ದೇನೆ ಎಂದರು.