ಕಾಂಗ್ರೆಸ್ ಜನರ ಆಸೆ-ಆಕಾಂಕ್ಷೆಗಳ ಪ್ರತಿಬಿಂಬ: ವಿನಯಕುಮಾರ ಸೊರಕೆ
Aug 24 2025, 02:00 AM ISTಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ. ಅದು ಜನರ ಆಸೆ-ಆಕಾಂಕ್ಷೆಗಳ ಪ್ರತಿಬಿಂಬ. ಐದು ಭರವಸೆಗಳು ಕೇವಲ ಘೋಷಣೆಗಳಲ್ಲ. ಜನಜೀವನದ ಬಾಳಿನ ಬೆಳಕು ನೀಡುವ ಕ್ರಾಂತಿಕಾರಿ ನಿರ್ಣಯಗಳು. ಶಕ್ತಿ ಯೋಜನೆಯ ಉಚಿತ ವಿದ್ಯುತ್, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಮಹಿಳೆಯರ ಉಚಿತ ಬಸ್ ಪ್ರಯಾಣ ಇವೆಲ್ಲವೂ ಜನಜೀವನದಲ್ಲಿ ಆರ್ಥಿಕ ಭದ್ರತೆಯ ಕಂಬಗಳನ್ನು ನಿರ್ಮಿಸುವ ಸಾಧನಗಳಾಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.