ವ್ಹಿಪ್ ಉಲ್ಲಂಘಿಸಿದ ಜೆಡಿಎಸ್ ಸದಸ್ಯರಿಗೆ ಡೀಸಿ ನೋಟಿಸ್
Sep 17 2024, 12:48 AM ISTಜೆಡಿಎಸ್ ಪಕ್ಷದ ಚಿಹ್ನೆಯಡಿ ಗೆಲುವು ಸಾಧಿಸಿದ ಎಲ್ಲರೂ ಒಮ್ಮತದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಭ್ಯರ್ಥಿಗೆ ಮತ ಹಾಕುವಂತೆ ಸಭೆ ನಡೆಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ವಿಪ್ ಕೂಡಾ ಜಾರಿಗೊಳಿಸಿದ್ದರು. ಬಹಿರಂಗವಾಗಿಯೇ ಕಾಂಗ್ರೆಸ್ ಶಾಸಕರೊಂದಿಗೆ ಗುರುತಿಸಿಕೊಂಡಿರುವ ಸಮೀವುಲ್ಲಾ ಹಾಗೂ ಮನೋಹರ್ ಇದ್ಯಾವುದಕ್ಕೂ ಸೊಪ್ಪು ಹಾಕಿಲ್ಲ. ಇದಲ್ಲದೇ ಜೆಡಿಎಸ್ನಿಂದ ಉಚ್ಚಾಟಿತರಾಗಿರುವ ಸಿ.ಎಂ.ಇಬ್ರಾಹಿಂ ಬಣದ ಹೆಸರಿನಲ್ಲಿ ಉಭಯ ಸ್ಥಾನಗಳಿಗೆ ಉಮೇದುವರಿಕೆ ಸಲ್ಲಿಸಿ ಸುಜಾತಾ ರಮೇಶ್ ಸೋಲಿಗೆ ಕಾರಣರಾಗಿದ್ದರು.ಹೀಗಾಗಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಸುಜಾತ ರಮೇಶ್ ವಿರುದ್ಧ ಮತ ಚಲಾಯಿಸಿದ ಹದಿಮೂರು ಮಂದಿ ಹಾಗೂ ಒಬ್ಬ ಸದಸ್ಯ ಸೇರಿದಂತೆ ಹದಿನಾಲ್ಕು ಮಂದಿಗೆ ಸೆ.೨೦ರ ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿಯಾಗಿದೆ.