ಬಸ್ ನಿಲ್ದಾಣ ಪ್ರವೇಶ ದ್ವಾರದ ದುರಸ್ತಿಗೆ ಪರಿಶೀಲನೆ
Nov 06 2024, 11:46 PM ISTಬಸ್ ನಿಲ್ದಾಣದ ಪ್ರವೇಶದ್ವಾರ ಗುಂಡಿ ಮುಚ್ಚುವ ಶಾಶ್ವತ ಕಾಮಗಾರಿ ನಡೆಸಲು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಸ್ ನಿಲ್ದಾಣದ ಪ್ರವೇಶದ್ವಾರ ಗುಂಡಿಬಿದ್ದು ಅಪಘಾತ ಸಂಭವಿಸುವ ಬಗ್ಗೆ ಮಾಹಿತಿ ಪಡೆದು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ಮತ್ತು ಕರವೇ ಅಧ್ಯಕ್ಷ ಚಂದ್ರಶೇಖರ್ ಇತರರು, ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದು, ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಂದು ಗುಂಡಿ ಮುಚ್ಚಲು ಶಾಶ್ವತ ಕಾಮಗಾರಿ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.