ಮೂರನೇ ಬಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗರಾಜ
Aug 29 2025, 01:00 AM ISTದೇವೇಗೌಡರ ಕುಟುಂಬ ಹಾಗೂ ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಗಿರುವ ಒಕ್ಕಲಿಗ ಸಮಾಜದ ಪ್ರಭಾವಿ ಮುಖಂಡ ಎಂ.ಎ ನಾಗರಾಜ್ ಅವರಿಗೆ ಮೂರನೇ ಬಾರಿಗೆ ಎಚ್ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನ ದೊರಕಿರುವುದು ಮಂಕಾಗಿದ್ದ ಜೆಡಿಎಸ್ ಪಾಳಯಕ್ಕೆ ಮತ್ತೆ ಶಕ್ತಿ ಬಂದಂತಾಗಿದೆ. ಈಗ ಮೂರನೇ ಬಾರಿಗೆ ಎಚ್ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನವನ್ನು ಬೇಲೂರಿನ ಒಕ್ಕಲಿಗರ ಪ್ರಭಾವಿ ಮುಖಂಡ, ಮಾಜಿ ತಾಪಂ ಅಧ್ಯಕ್ಷ ಎಂ ಎ ನಾಗರಾಜ್ ಅವರಿಗೆ ಕೊಡುವುದರ ಮೂಲಕ ಜೆಡಿಎಸ್ ಪಕ್ಷವನ್ನು ಮತ್ತೆ ಬಲಿಷ್ಠಗೊಳಿಸುವತ್ತ ಪಕ್ಷದ ವರಿಷ್ಠರು, ಮುಂದಾಗಿರುವ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.