ಗುರಿ ತಕ್ಕಂತೆ ಪೂರಕ ಶಿಕ್ಷಣ ಪಡೆದಾಗ ಸಾಧನೆ ಸಾಧ್ಯ

Sep 17 2025, 01:06 AM IST
ಜೀವನದಲ್ಲಿ ಏನಾಗಬೇಕೆಂಬ ಗುರಿಯೊಂದಿಗೆ ಯುವಕರು ಶಿಕ್ಷಣ ಪಡೆದುಕೊಂಡರೆ ಮಾತ್ರ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ರೋಟರಿ ವಲಯ 9ರ ಮಾಜಿ ಸಹಾಯಕ ಗೌವರ್ನರ್ ಹಾಗೂ ವೈದ್ಯೆ ಡಾ. ಸೌಮ್ಯ ಮಣಿ ಅವರು ಸಲಹೆ ನೀಡಿದರು. ಸಮಾಜ ಸೇವಕ ಹಾಗೂ ಉದ್ಯಮಿ ವಿಜಯ್ ಕುಮಾರ್ ಮಾತನಾಡಿ, ಸಮಾಜ ನಮಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಅದನ್ನು ಮರಳಿ ಸಮಾಜಕ್ಕೆ ನೀಡಬೇಕೆಂಬ ಆಲೋಚನೆ ಎಲ್ಲರಲ್ಲಿ ಇರೋದಿಲ್ಲ. ಆದರೆ ಅಕ್ಷರ ಬುಕ್ ಹೌಸ್ ಪುಸ್ತಕಗಳನ್ನು ನೀಡಿ ಭವಿಷ್ಯದ ಆಧಾರಸ್ತಂಭವಾಗುವ ಮಕ್ಕಳಿಗೆ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಇಂತಹ ಕಾರ್ಯಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಿದರೆ ಪ್ರತಿಯೊಬ್ಬರ ಮನೆಯ ಮಕ್ಕಳು ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದರು.