ದೇಶವನ್ನು ಮುನ್ನಡೆಸುವ ದಿಕ್ಸೂಚಿಯೇ ಸಂವಿಧಾನ: ಶ್ರೀಪಾದ
Jan 28 2025, 12:45 AM ISTಕನ್ನಡಪ್ರಭ ವಾರ್ತೆ ವಿಜಯಪುರ ಭವ್ಯ ಭಾರತವನ್ನು ಸತ್ಯದ, ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಮುನ್ನಡೆಸುವ ಬೃಹತ್ ದಿಕ್ಸೂಚಿಯೇ ನಮ್ಮ ಹೆಮ್ಮೆಯ ಭಾರತೀಯ ಸಂವಿಧಾನವೆಂದು ಡಾ.ಶ್ರೀಪಾದ ಕುಲಕರ್ಣಿ ಹೇಳಿದರು. ನಗರದ ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.