ಸಾಹಿತ್ಯ ಅಧ್ಯಯನ ಮೂಲಕ ಜ್ಞಾನ ವೃದ್ಧಿಸಿಕೊಳ್ಳಿ
May 28 2025, 12:05 AM ISTಕಾವ್ಯಕ್ಕೆ ವ್ಯಕ್ತಿಯ ಮನಸ್ಸನ್ನು ಸುಸಂಸ್ಕೃತಗೊಳಿಸುವ ಶಕ್ತಿಯಿದೆ. ಅದರಲ್ಲಿಯೂ ತಾಯಿಭಾಷೆಯ ಮೂಲಕ ಸಾಹಿತ್ಯವನ್ನು ಕಲಿತಲ್ಲಿ ಪ್ರಜ್ಞೆ ಮತ್ತಷ್ಟು ವಿಸ್ತಾರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಾಸಕ್ತಿಯನ್ನು ವಿದ್ಯಾರ್ಥಿ ಯುವಜನರು ಬೆಳೆಸಿಕೊಳ್ಳಬೇಕು. ಪುಸ್ತಕಗಳನ್ನು ಓದುವ, ಅಧ್ಯಯನ ಮಾಡುವ ಆ ಮೂಲಕ ಜ್ಞಾನಪರಿಧಿಯನ್ನು ಹಿಗ್ಗಿಸಿಕೊಳ್ಳಬಹುದು