ಬನಶಂಕರಿ ಜಾತ್ರೆ ತೇರಿನ ಹಗ್ಗ ಹಳಿ ಬಂಡಿ ಮೆರವಣಿಗೆಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಬನಶಂಕರಿದೇವಿ ಜಾತ್ರೆ ತೇರು ಎಳೆಯಲು ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗ ಕಳುಹಿಸಲಾಯಿತು. ಹಗ್ಗವನ್ನು ಗ್ರಾಮಸ್ಥರು ಭಕ್ತಿ, ಸಡಗರದಿಂದ ಸೋಮವಾರ ಬೆಳಗ್ಗೆ ಹಳಿ ಬಂಡಿಯಲ್ಲಿಟ್ಟುಕೊಂಡು ಮೆರವಣಿಗೆ ಮೂಲಕ ಬನಶಂಕರಿದೇವಿ ಸನ್ನಿಧಾನಕ್ಕೆ ತೆರಳಿದರು.