ಹೊಟ್ಟು, ಮೇವಿನ ಅಭಾವ, ಹೆಚ್ಚಿದ ಬೇಡಿಕೆಗದಗ ಜಿಲ್ಲೆಯಲ್ಲಿ ಕಳೆದ ವರ್ಷ ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಶೇಂಗಾ ಹೊಟ್ಟು ಭೂಮಿಯಲ್ಲಿ ಇರುವಾಗಲೇ ಕೊಳೆತು ನಾಶವಾಗಿ ಅಷ್ಟಾಗಿ ಶೇಂಗಾ ಹೊಟ್ಟು ಶೇಖರಣೆಯಾಗಿರಲಿಲ್ಲ, ಪ್ರಸಕ್ತ ವರ್ಷ ಮಳೆ ಇಲ್ಲದೆ ಬರಗಾಲ ಛಾಯೆ ಆವರಿಸಿದ್ದು, ಅಷ್ಟೋ ಇಷ್ಟೋ ಮಳೆಗೆ ಬಿತ್ತಿದ ರೈತರು ಫಸಲು ಬೇಡ ಕನಿಷ್ಠ ಪಕ್ಷ ಜಾನುವಾರುಗಳಿಗೆ ಮೇವು ಆಗಲಿ ಎಂದರೆ ತೇವಾಂಶ ಕೊರತೆಯಿಂದ ಬೆಳವಣಿಗೆಯಲ್ಲಿ ಕುಂಠಿತವಾಗಿ ಹೊಟ್ಟು, ಮೇವಿನ ಅಭಾವ ಸೃಷ್ಟಿಯಾಗಿದೆ.