ಭಕ್ತರ ನೆರವಿನಿಂದ ಮಾತ್ರ ಹೊಸ ಗುಡಿ ನಿರ್ಮಾಣ ಸಾಧ್ಯಭಕ್ತರ ನೆರವು ಹಾಗೂ ಸಹಕಾರದಿಂದ ಮಾತ್ರ ಸಮಾಜದಲ್ಲಿ ಹೊಸ ಗುಡಿ, ಗುಂಡಾರಗಳ ನಿರ್ಮಾಣ ಕಾರ್ಯ ಸಾಧ್ಯವಾಗುತ್ತದೆ. ಹದಿನಾರು ವರ್ಷಗಳ ಹಿಂದೆ ಲೋಕಾರ್ಪಣೆಗೊಂಡಿದ್ದ ವೀರಭದ್ರೇಶ್ವರ ದೇವಸ್ಥಾನ ಈಗ ಭಕ್ತರ ನೆರವಿನಿಂದ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು. ಅವರು ಬುಧವಾರ ಮುಂಡರಗಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗಿದ ನೂತನ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.