ದೇಶ ಸುರಕ್ಷಿತವಾಗಿರಲು ಗಿಡ-ಮರ ಬೆಳೆಸಿಮಣ್ಣು, ನೀರು, ಗಾಳಿ, ಅಗ್ನಿ, ಆಕಾಶ ಮನುಷ್ಯನ ಆಸ್ತಿಗಳಾಗಿದ್ದು, ಇವುಗಳಿಗೆ ಎಲ್ಲಿಯವರೆಗೆ ತೊಂದರೆ ಆಗುವುದಿಲ್ಲವೋ ಅಲ್ಲಿಯವರೆಗೆ ದೇಶ ಸುರಕ್ಷಿತವಾಗಿರುತ್ತದೆ. ಆದರೆ ಇವು ಇಂದು ಸುರಕ್ಷಿತವಾಗಿಲ್ಲ. ಆದರಿಂದ ಗಿಡಮರಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕೊಲ್ಲಾಪುರದ ಕನೇರಿವಾಡಿ ಸಿದ್ಧಗಿರಿ ಮಹಾಸಂಸ್ಥಾನಮಠದ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು. ಡಂಬಳ ಹೋಬಳಿಯ ಡೋಣಿ ಸಮೀಪದ ಕಪ್ಪತ್ತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಆವರಣದಲ್ಲಿ ಜರುಗಿದ ಕಪ್ಪತ್ತಗುಡ್ಡ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.