ಬೆಳೆ ವಿಮೆ ಕಂಪನಿ ವಿರುದ್ಧ ರೈತರ ಪ್ರತಿಭಟನೆನರಗುಂದ ತಾಲೂಕಿನ ಕೊಣ್ಣೂರ ಹಾಗೂ ನರಗುಂದ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಸಂದರ್ಭದಲ್ಲಿ ಅತಿವೃಷ್ಟಿಯಾಗಿ ಗೋವಿನಜೋಳ, ಹೆಸರು, ಹತ್ತಿ ಹಾಗೂ ಉಳ್ಳಾಗಡ್ಡಿ ಬೆಳೆಗಳು ಹಾನಿಯಾಗಿದ್ದವು. ಅದಕ್ಕಾಗಿ ಬೆಳೆ ವಿಮೆಗಾಗಿ ಲಕ್ಷಾಂತರ ರುಪಾಯಿಗಳ ವಿಮಾ ಕಂತು ಪಾವತಿಸಲಾಗಿದೆ. ಆದರೆ ವಿಮಾ ಕಂತು ಪಾವತಿಸಿಕೊಂಡ ಒರಿಯಂಟಲ್ ಇನ್ಸೂರನ್ಸ್ ಕಂಪನಿ ಇಲ್ಲಿಯವರೆಗೂ ಎಲ್ಲ ರೈತರಿಗೆ ಬೆಳೆ ವಿಮೆಯಾಗಲಿ, ಮಧ್ಯಂತರ ಪರಿಹಾರವಾಗಲಿ ಪಾವತಿಸಿಲ್ಲ ಎಂದು ಆರೋಪಿಸಿ ರೈತರು ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.